ಬಾಂಗ್ಲಾದೇಶಿಯರ ಅಕ್ರಮ ಒಳನುಸುಳುವಿಕೆಯನ್ನು ಖಂಡಿಸಿ ಎಬಿವಿಪಿ ನೀಡಿರುವ ಬಂದ್ ಕರೆಗೆ ಬುಧವಾರ ರಾಜ್ಯವ್ಯಾಪಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇಶದಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ಒಳನುಸುಳುತ್ತಿದ್ದು, ಅವರನ್ನು ಹೊರಹಾಕಬೇಕು ಎಂದು ಆಗ್ರಹಿಸಿ ಇಂದು ಎಬಿವಿಪಿ ರಾಜ್ಯವ್ಯಾಪಿ ಕಾಲೇಜ್ ಬಂದ್ಗೆ ಕರೆ ನೀಡಿತ್ತು.
ಬಂದ್ ಕರೆ ಹಿನ್ನೆಲೆಯಲ್ಲಿ ಶಿರಸಿ, ಮುಂಡಗೋಡು, ಮಂಗಳೂರು, ಧಾರವಾಡ, ಉಡುಪಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾಲೇಜು ಬಂದ್ನಲ್ಲಿ ಭಾಗವಹಿಸಿವೆ.
ಆದರೆ ಎಬಿವಿಪಿ ಬಂದ್ ಕರೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಕಾಲೇಜುಗಳಿಗೆ ರಜೆ ಘೋಷಿಸಿಲ್ಲವಾಗಿತ್ತು. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತರಗತಿಗಳನ್ನು ಬಹಿಷ್ಕರಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. |