ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸೋಲಿನ ಹತಾಶೆ: ಅಂಬರೀಷ್ ಸ್ಪರ್ಧೆಗೆ ಗುಡ್ ಬೈ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಲಿನ ಹತಾಶೆ: ಅಂಬರೀಷ್ ಸ್ಪರ್ಧೆಗೆ ಗುಡ್ ಬೈ
ದುಡ್ಡಿನ ರಾಜಕಾರಣ ಸಾಕಾಗಿದೆ...
NRB
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಿಂದ ಸೋಲು ಕಂಡಿರುವ ಕಾಂಗ್ರೆಸ್‌ನ ಅಂಬರೀಷ್ ಮುಂದಿನ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದೇನೆ. ಇನ್ನು ಮುಂದೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳಲು ಹೋಗಲಿ. ಜನರಲ್ಲಿ ಮತ ಕೇಳುವ ಅರ್ಹತೆಯೇ ನನಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿನ ಸೋಲು ಹತಾಶೆ ಮೂಡಿಸಿದೆ. ಸೋತ ಮುಖ ಹೊತ್ತುಕೊಂಡು ಮತ್ತೊಮ್ಮೆ ಹೇಗೆ ಮತ ಕೇಳಲಿ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯೂ ಸೇರಿದಂತೆ ಯಾವ ಚುನಾವಣೆಯಲ್ಲಿಯೂ ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ರಾಜಕಾರಣದಲ್ಲಿ ಎಲ್ಲವೂ ದುಡ್ಡಿನ ಮೇಲೆ ನಡೆಯುತ್ತಿದೆ. ಈ ದುಡ್ಡಿನ ರಾಜಕಾರಣ ಸಾಕಾಗಿದೆ. ಹೀಗಾಗಿ ಇದೆಲ್ಲದರಿಂದ ದೂರ ಇರಲು ತೀರ್ಮಾನಿಸಿದ್ದೇನೆ ಎಂದು ಅವರು ತಿಳಿಸಿದರು.

ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ತಮ್ಮನ್ನು ಸೆಳೆಯಲು ಪ್ರಯತ್ನ ನಡೆಸಿದೆ. ಆದರೆ ಯಾವ ಪಕ್ಷಕ್ಕೂ ಹೋಗಲು ಇಷ್ಟವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೈದ್ಯರ ಮುಷ್ಕರ ತೀವ್ರ: ರೋಗಿಗಳ ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮತಾಂತರ ರಾದ್ಧಾಂತ
ರಾಜ್ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ
ಶಾಸ್ತ್ರೀಯ ಸ್ಥಾನ: ನೂರು ಮಂದಿಗೆ ಸನ್ಮಾನ
ವೈದ್ಯರ ಮುಷ್ಕರ: 3 ಬೇಡಿಕೆ ಈಡೇರಿಕೆ
ಪಿಯು ಬೋರ್ಡ್‌ಗೆ ಬಾಂಬ್ ಬೆದರಿಕೆ ಪತ್ರ !