ರಾಜ್ಯಾದ್ಯಂತ ಶನಿವಾರ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಕನಕ ಜಯಂತಿ ಅಂಗವಾಗಿ ಇಂದು ಸರ್ಕಾರ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿತ್ತು. ಈ ಮೂಲಕ ಕನಕದಾಸರ ಜಯಂತಿಯನ್ನು ಮೊತ್ತ ಮೊದಲ ಬಾರಿಗೆ ಸರ್ಕಾರದ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ರಾಜ್ಯದ ವಿವಿಧೆಡ ಕನಕ ಜಯಂತಿ ಅಂಗವಾಗಿ ಆಕರ್ಷಕ ಮೆರವಣಿಗೆ, ಟ್ಯಾಬ್ಲೋ ಶೋಗಳು ಜನಮನರಂಜಿಸಿದವು. ಈ ನಿಟ್ಟಿನಲ್ಲಿ ಕನಕದಾಸರ ಹುಟ್ಟೂರಾದ ಬಾಡಾ ಗ್ರಾಮ, ಧಾರವಾಡ, ಹಾಸನ, ಶಿರಸಿ, ಮೈಸೂರು, ಉಡುಪಿಯಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. |