ರಾಜ್ಯಾದ್ಯಂತ ಪ್ರವಾಸ ಮಾಡ ಬಯಸುವವರಿಗೆ ಕೆಎಸ್ಆರ್ಟಿಸಿ ಒಂದು ಮೆಗಾ ಆಫರ್ ನೀಡಿದೆ. ಕೇವಲ 700 ರೂ. ಪಾವತಿಸಿ ವಾರದ ಮೂರು ದಿನ ರಾಜ್ಯದಾದ್ಯಂತ ರಾಜಹಂಸ ಬಸ್ನಲ್ಲಿ ಪ್ರಯಾಣ ಬೆಳೆಸಬಹುದು. 'ಸುವರ್ಣ ಟಿಕೆಟ್' ಎಂಬ ಈ ಯೋಜನೆಯಲ್ಲಿ ಟಿಕೆಟ್ ಪಡೆದು ರಾಜ್ಯದ ಯಾವ ಭಾಗಕ್ಕೆ ಬೇಕಾದರೂ ಸಂಚರಿಸಬಹುದು. ಆದರೆ ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಈ ಸೌಲಭ್ಯ ಲಭ್ಯ. ಒಂದು ಕುಟುಂಬದ ಎಷ್ಟು ಸದಸ್ಯರು ಬೇಕಾದರೂ ಟೆಕೆಟ್ ಖರೀದಿಸಬಹುದು.
ಕೆಎಸ್ಆರ್ಟಿಸಿ ಬಸ್ನತ್ತ ಜನರನ್ನು ಆಕರ್ಷಿಸಲು ಹಾಗೂ ಒಂದೇ ಸಲ ಸಂಸ್ಥೆಗೆ ಆದಾಯ ಬರುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ.700 ರೂಪಾಯಿ ಟಿಕೆಟ್ ಖರೀದಿಸುವ ಮೂಲಕ ರಾಜಹಂಸ ಬಸ್ಗಳು ಸಂಚರಿಸುವ ರಾಜ್ಯದ ಎಲ್ಲಾ ಪ್ರದೇಶಗಳಿಗೂ ಸಂಚರಿಸಬಹುದು.
ಈ ವ್ಯವಸ್ಥೆಯಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇಲ್ಲ. ಬಸ್ನಲ್ಲಿ ಸೀಟು ಖಾಲಿ ಇದ್ದರೆ ಮಾತ್ರ ಪ್ರಯಾಣಿಸಬಹುದು. ಎಲ್ಲ ಕೆಎಸ್ಆರ್ಟಿಸಿ ಬುಕ್ಕಿಂಗ್ ಸೆಂಟರ್ಗಳಲ್ಲಿ ಹಾಗೂ ನಿರ್ವಾಹಕರಲ್ಲಿ ಈ ಟಿಕೆಟ್ ದೊರೆಯಲಿದೆ. |