ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 700 ರೂ.ಗೆ ರಾಜ್ಯಾದ್ಯಂತ ಪ್ರವಾಸ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
700 ರೂ.ಗೆ ರಾಜ್ಯಾದ್ಯಂತ ಪ್ರವಾಸ...
ರಾಜ್ಯಾದ್ಯಂತ ಪ್ರವಾಸ ಮಾಡ ಬಯಸುವವರಿಗೆ ಕೆಎಸ್ಆರ್‌‌ಟಿಸಿ ಒಂದು ಮೆಗಾ ಆಫರ್ ನೀಡಿದೆ. ಕೇವಲ 700 ರೂ. ಪಾವತಿಸಿ ವಾರದ ಮೂರು ದಿನ ರಾಜ್ಯದಾದ್ಯಂತ ರಾಜಹಂಸ ಬಸ್‌ನಲ್ಲಿ ಪ್ರಯಾಣ ಬೆಳೆಸಬಹುದು.

'ಸುವರ್ಣ ಟಿಕೆಟ್‌‌‌' ಎಂಬ ಈ ಯೋಜನೆಯಲ್ಲಿ ಟಿಕೆಟ್ ಪಡೆದು ರಾಜ್ಯದ ಯಾವ ಭಾಗಕ್ಕೆ ಬೇಕಾದರೂ ಸಂಚರಿಸಬಹುದು. ಆದರೆ ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಈ ಸೌಲಭ್ಯ ಲಭ್ಯ. ಒಂದು ಕುಟುಂಬದ ಎಷ್ಟು ಸದಸ್ಯರು ಬೇಕಾದರೂ ಟೆಕೆಟ್ ಖರೀದಿಸಬಹುದು.

ಕೆಎಸ್ಆರ್‌ಟಿಸಿ ಬಸ್‌ನತ್ತ ಜನರನ್ನು ಆಕರ್ಷಿಸಲು ಹಾಗೂ ಒಂದೇ ಸಲ ಸಂಸ್ಥೆಗೆ ಆದಾಯ ಬರುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ.700 ರೂಪಾಯಿ ಟಿಕೆಟ್ ಖರೀದಿಸುವ ಮೂಲಕ ರಾಜಹಂಸ ಬಸ್‌‌ಗಳು ಸಂಚರಿಸುವ ರಾಜ್ಯದ ಎಲ್ಲಾ ಪ್ರದೇಶಗಳಿಗೂ ಸಂಚರಿಸಬಹುದು.

ಈ ವ್ಯವಸ್ಥೆಯಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇಲ್ಲ. ಬಸ್‌‌ನಲ್ಲಿ ಸೀಟು ಖಾಲಿ ಇದ್ದರೆ ಮಾತ್ರ ಪ್ರಯಾಣಿಸಬಹುದು. ಎಲ್ಲ ಕೆಎಸ್ಆರ್‌‌ಟಿಸಿ ಬುಕ್ಕಿಂಗ್ ಸೆಂಟರ್‌ಗಳಲ್ಲಿ ಹಾಗೂ ನಿರ್ವಾಹಕರಲ್ಲಿ ಈ ಟಿಕೆಟ್ ದೊರೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಸಮಸ್ಯೆ: ರೈತ ನೇಣಿಗೆ ಶರಣು
ಬಜೆಟ್ ಅನುಷ್ಠಾನ: ಯಡಿಯೂರಪ್ಪ ಅಸಮಾಧಾನ
ಚಿಕ್ಕಮಗಳೂರು: ಎನ್‌‌ಕೌಂಟರ್‌ಗೆ 3 ನಕ್ಸಲೀಯರ ಬಲಿ
ಸಮಾವೇಶ ರಾದ್ಧಾಂತ: ಕುಮಾರಸ್ವಾಮಿ ಕಿಡಿ
ಶಾಸ್ತ್ರೀಯ ಸ್ಥಾನ-ರಾಜ್ಯ ಪ್ರತಿವಾದಿಯಾಗಲಿ: ಚಿಮೂ
ಭಯೋತ್ಪಾದನೆಗೆ ಬಿಜೆಪಿ ಬೆಂಬಲ: ದೇಶ್‌ಮುಖ್