ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗೌಡರು 2 ಬಾರಿ ಸಿಎಂ ಗಾದಿ ತಪ್ಪಿಸಿದ್ದರು: ಸಿದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೌಡರು 2 ಬಾರಿ ಸಿಎಂ ಗಾದಿ ತಪ್ಪಿಸಿದ್ದರು: ಸಿದ್ದು
NRB
ನನಗೆ ಮುಖ್ಯಮಂತ್ರಿ ಹುದ್ದೆ ಸಿಗದಂತೆ ಮಾಜಿ ಪ್ರಧಾನಿ ದೇವೇಗೌಡರು ಎರಡು ಬಾರಿ ಅಡ್ಡಗಾಲು ಹಾಕಿರುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕ ಕೊನೆಗೂ ಮೌನ ಮುರಿದಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರ ನೀಚ ರಾಜಕಾರಣ ಹೇವರಿಕೆ ಹುಟ್ಟಿಸುವಂತಹದ್ದು, ನನಗೆ ಮುಖ್ಯಮಂತ್ರಿ ಪಟ್ಟ ಸಿಗದಂತೆ ಎರಡು ಬಾರಿ ಅಡ್ಡಗಾಲು ಹಾಕಿದ್ದರು. ಸಿಎಂ ಪಟ್ಟ ಸಿಗದಂತೆ ತಾನು ಅಡ್ಡಗಾಲು ಹಾಕಿಲ್ಲ ಅಂತ ದೇವೇಗೌಡರು ಪ್ರಮಾಣ ಮಾಡಲಿ ಎಂದು ಅವರು ಈ ಸಂದರ್ಭದಲ್ಲಿ ಸವಾಲು ಹಾಕಿದರು.

ದೇವೇಗೌಡರು ಆ ರೀತಿ ಪ್ರಮಾಣ ಮಾಡಿ ಹೇಳಿದ್ದೇ ಆಗಿದ್ದಲ್ಲಿ ನಾನು ಅವರ ವಿರುದ್ಧ ಇನ್ನೆಂದಿಗೂ ಮಾತನಾಡುವುದಿಲ್ಲ ಎಂದೂ ಅವರು ಹೇಳಿದರು.

ಅಲ್ಲದೇ ಉಪಮುಖ್ಯಮಂತ್ರಿ ಆಗಲು ದೇವೇಗೌಡರು ಕಾರಣರಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಜನತಾ ಪರಿವಾರದಿಂದ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಲು ದೇವೇಗೌಡರೇ ಕಾರಣ ಎಂದು ಒತ್ತಿ ಹೇಳಿದರು.

ಪತ್ರಿಕಾಗೋಷ್ಠಿ ಉದ್ದಕ್ಕೂ ಮಾಜಿ ಪ್ರಧಾನಿ ದೇವೇಗೌಡರ ಕ್ಷುದ್ರ ರಾಜಕಾರಣದ ವಿರುದ್ಧ ಹರಿಹಾಯ್ದು ಸಿದ್ದರಾಮಯ್ಯ, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜ.16ರಿಂದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
700 ರೂ.ಗೆ ರಾಜ್ಯಾದ್ಯಂತ ಪ್ರವಾಸ...
ವಿದ್ಯುತ್ ಸಮಸ್ಯೆ: ರೈತ ನೇಣಿಗೆ ಶರಣು
ಬಜೆಟ್ ಅನುಷ್ಠಾನ: ಯಡಿಯೂರಪ್ಪ ಅಸಮಾಧಾನ
ಚಿಕ್ಕಮಗಳೂರು: ಎನ್‌‌ಕೌಂಟರ್‌ಗೆ 3 ನಕ್ಸಲೀಯರ ಬಲಿ
ಸಮಾವೇಶ ರಾದ್ಧಾಂತ: ಕುಮಾರಸ್ವಾಮಿ ಕಿಡಿ