ಡಿಸೆಂಬರ್ನಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಲ ಏನೆಂಬುದನ್ನು ತೋರಿಸುತ್ತೇನೆ. ಜೆಡಿಎಸ್, ಕಾಂಗ್ರೆಸ್ ಸಮಾವೇಶಗಳನ್ನು ಮೀರಿಸುವಂತಹ ಕಾರ್ಯಕ್ರಮ ಅದಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವರ್ತೂರು ಪ್ರಕಾಶ್ ಹೇಳಿದ್ದಾರೆ.
ತತ್ವ-ಸಿದ್ದಾಂತ, ನೀತಿ ನಿಯಮದ ಆಧಾರದ ಮೇಲೆ ಜನ ಸೇರಬೇಕು. ಕುಮಾರಸ್ವಾಮಿ ಬಲ ಪ್ರದರ್ಶನಕ್ಕೆ ನೀರಿನಂತೆ ಹಣ ಖರ್ಚು ಮಾಡಿ ಜನರನ್ನು ಕರೆಸಿದ್ದಾರೆ. ಡಿಕೆಶಿ ಸಮಾವೇಶಕ್ಕೆ 50 ಸಾವಿರ ಜನ ಬಂದಿದ್ದರು. ಅದಕ್ಕಾಗಿ ತಿಂಗಳುಗಟ್ಟಲೆ ಸುತ್ತಾಡಿದ್ದಾರೆ ಎಂದು ಕುಹಕವಾಡಿದರು.
ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕಾಗಿ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿಯವರು ತನಿಖಾ ತಂಡ ನೇಮಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕುರುಬ ಸಮಾಜದ ವಿರೋಧಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಮುಖ್ಯಮಂತ್ರಿ ಕೈ ಬಿಡಬೇಕು ಎಂದು ಒತ್ತಾಯಿಸಿದರು. |