ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗುಲ್ಬರ್ಗಾ: ಮುಂಬೈ-ಚೆನ್ನೈ ರೈಲು ದರೋಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಲ್ಬರ್ಗಾ: ಮುಂಬೈ-ಚೆನ್ನೈ ರೈಲು ದರೋಡೆ
ಇಲ್ಲಿನ ಅಫ್ಜಲ್‌ಪುರ ಗಾಣಗಾಪುರದ ಸ್ಟೇಶನ್ ಸಮೀಪ ಗುರುವಾರ ಬೆಳಿಗ್ಗಿನ ಜಾವ ಮುಂಬೈ-ಚೆನ್ನೈ ರೈಲನ್ನು ತಡೆದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನೂ ಲೂಟಿ ಮಾಡಿರುವ ಘಟನೆ ನಡೆದಿದೆ.

ಅಫ್ಜಲ್‌ಪುರದ ಗಾಣಗಾಪುರ ಸ್ಟೇಷನ್ ಬಳಿ ಏಕಾಏಕಿ 20ಮಂದಿ ದರೋಡೆಕೋರರ ತಂಡವೊಂದು ರೈಲನ್ನು ತಡೆದು ಬೋಗಿಯೊಳಗೆ ನುಗ್ಗಿ ಮಹಿಳೆಯರಲ್ಲಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ದರೋಡೆಕೋರರು ಪರಾರಿಯಾಗಿದ್ದು, ಸಿಆರ್‌ಪಿಎಫ್ ಹಾಗೂ ರೈಲ್ವೆ ಪೊಲೀಸರು ಜಿಂಟಿಯಾಗಿ ತೀವ್ರ ಶೋಧ ಕಾರ್ಯಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ದರೋಡೆಕೋರರ ತಂಡ ಏಕಾಏಕಿ ಬೋಗಿಯೊಳಗೆ ಒಳನುಗ್ಗಿ ದರೋಡೆಗೈದ ಘಟನೆಯಿಂದಾಗಿ ಪ್ರಯಾಣಿಕರು ಭಯಭೀತರಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಮಾವೇಶ: ಮಾಹಿತಿ ನೀಡಲು ಸರ್ಕಾರಕ್ಕೆ ಸೂಚನೆ
ಬಿಜೆಪಿಯದ್ದು ಗೂಂಡಾ ಸಂಸ್ಕೃತಿ: ಕುಮಾರಸ್ವಾಮಿ
ನಕ್ಸಲ್ ನಿಗ್ರಹಕ್ಕೆ ಆಧುನಿಕ ಶಸ್ತ್ರಾಸ್ತ್ರ: ಸಿಎಂ
ಆಸ್ನೋಟಿಕರ್ ಪ್ರಕರಣ: ಎಸಿ ಎತ್ತಂಗಡಿ
ಉತ್ತಮ ಸೇವೆಯಿಂದ ಜನಮಾನ್ಯತೆ: ಠಾಗೋರ್
ಕಾನೂನು ಪ್ರಾಧಿಕಾರದಿಂದ ಜನರ ಬಳಿಗೆ 'ನ್ಯಾಯಾಲಯ'