ಇಲ್ಲಿನ ಅಫ್ಜಲ್ಪುರ ಗಾಣಗಾಪುರದ ಸ್ಟೇಶನ್ ಸಮೀಪ ಗುರುವಾರ ಬೆಳಿಗ್ಗಿನ ಜಾವ ಮುಂಬೈ-ಚೆನ್ನೈ ರೈಲನ್ನು ತಡೆದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನೂ ಲೂಟಿ ಮಾಡಿರುವ ಘಟನೆ ನಡೆದಿದೆ.
ಅಫ್ಜಲ್ಪುರದ ಗಾಣಗಾಪುರ ಸ್ಟೇಷನ್ ಬಳಿ ಏಕಾಏಕಿ 20ಮಂದಿ ದರೋಡೆಕೋರರ ತಂಡವೊಂದು ರೈಲನ್ನು ತಡೆದು ಬೋಗಿಯೊಳಗೆ ನುಗ್ಗಿ ಮಹಿಳೆಯರಲ್ಲಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದರೋಡೆಕೋರರು ಪರಾರಿಯಾಗಿದ್ದು, ಸಿಆರ್ಪಿಎಫ್ ಹಾಗೂ ರೈಲ್ವೆ ಪೊಲೀಸರು ಜಿಂಟಿಯಾಗಿ ತೀವ್ರ ಶೋಧ ಕಾರ್ಯಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ದರೋಡೆಕೋರರ ತಂಡ ಏಕಾಏಕಿ ಬೋಗಿಯೊಳಗೆ ಒಳನುಗ್ಗಿ ದರೋಡೆಗೈದ ಘಟನೆಯಿಂದಾಗಿ ಪ್ರಯಾಣಿಕರು ಭಯಭೀತರಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
|