ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಂಗ್ಲೆ ನಿರ್ಮಾಣ: ಪ್ರತಿಪಕ್ಷಗಳಿಂದ ಅಪಸ್ವರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗ್ಲೆ ನಿರ್ಮಾಣ: ಪ್ರತಿಪಕ್ಷಗಳಿಂದ ಅಪಸ್ವರ
ಹೆಬ್ಬಾಳದ ಕೃಷಿ ಕೈಗಾರಿಕೆ ನಿಗಮಕ್ಕೆ ಒಳಪಟ್ಟ ಸುಮಾರು 14 ಎಕರೆ ಪ್ರದೇಶದಲ್ಲಿ ಮಂತ್ರಿಗಳಿಗೆ ಬಂಗಲೆ ನಿರ್ಮಿಸುವ ಸರ್ಕಾರದ ಪ್ರಸ್ತಾವನೆಗೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ.

ಒಂದೆಡೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಿಗೆ ಇನ್ನೂ ಸರಕಾರಿ ಬಂಗ್ಲೆ ಭಾಗ್ಯ ದೊರಕಿಲ್ಲ. ಇನ್ನೊಂದೆಡೆ ವಾಸ್ತು ದೋಷ ಎಂಬ ಒಂದೇ ಕಾರಣಕ್ಕೆ ಕಾವೇರಿ ಹಾಗೂ ಅನುಗ್ರಹಗಳು ಯಾರಿಗೂ ಬೇಡವಾಗಿವೆ. ಅಲ್ಲದೇ, ಮಾಜಿ ಸಚಿವ ರೇವಣ್ಣ ಮಂತ್ರಿಗಿರಿ ಹೋಗಿ ಒಂದು ವರ್ಷ ಕಳೆದರೂ ಬಂಗಲೆ ಬಿಡುವ ಔದಾರ್ಯ ತೋರಿಲ್ಲ. ಇಷ್ಟರ ನಡುವೆ ಅದ್ದೂರಿ ಬಂಗಲೆಗಳ ನಿರ್ಮಾಣಕ್ಕೆ ಮುಂದಾಗಿದೆ.

ಸರಕಾರದ ಈ ಐಷಾರಾಮಿ ನಿರ್ಧಾರದ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು, ಅಗತ್ಯಕ್ಕೆ ತಕ್ಕಂತೆ ಬಂಗಲೆಗಳನ್ನು ಕಟ್ಟಲಿ. ಅದನ್ನು ಬಿಟ್ಟು ವಾಸ್ತು ಹೆಸರಲ್ಲಿ ಅರಮನೆಗಳ ನಿರ್ಮಾಣ ಬೇಡ. ಈಗ ಒಬ್ಬೊಬ್ಬರು ಎರಡೆರಡು ಮನೆಗಳನ್ನು ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ವಾಸ್ತು ಹೆಸರಿನಲ್ಲಿ ಕೆಲವು ಮನೆಗಳು ಯಾರಿಗೂ ಬೇಡವಾಗಿದೆ ಎಂದಿದ್ದಾರೆ.

ಜನಸಾಮಾನ್ಯರ ಆಶ್ರಯಕ್ಕೆ ಕಟ್ಟಿಬದ್ಧವಾಗಬೇಕಾದ ಸರ್ಕಾರ ಬಂಗಲೆ ನಿರ್ಮಾಣಕ್ಕೆ ಹೊರಟಿದೆ. ಇದರಿಂದಲೇ ಸರಕಾರದ ಆದ್ಯತೆ ಯಾವುದಕ್ಕೆಂದು ತಿಳಿಯುತ್ತದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆತ್ಮಹತ್ಯೆ:ಆರೋಪಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಎನ್‌ಕೌಂಟರ್: ಇಬ್ಬರು ನಕ್ಸಲ್‌ರ ಗುರುತು ಪತ್ತೆ
ನೀರಿಗೆ ಮೀಟರ್ ಕಡ್ಡಾಯ: ಕಟ್ಟಾ ಸುಬ್ರಹ್ಮಣ್ಯ
ವಿದ್ಯುತ್ ಕದ್ದರೆ ಕ್ರಿಮಿನಲ್ ದಾವೆ: ಯಡಿಯೂರಪ್ಪ
ಹೆಬ್ಬಾಳದಲ್ಲಿ ಸಚಿವರಿಗಾಗಿ ಐಷಾರಾಮಿ ಬಂಗಲೆ
ಚೆನ್ನಿಗಪ್ಪ ಹಲ್ಲೆ ತನಿಖೆಗೆ ವಿಶೇಷ ತಂಡ