ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸರಕಾರಿ ಗೌರವದೊಂದಿಗೆ ಗುರುಪ್ರಸಾದ್ ಅಂತ್ಯಕ್ರಿಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರಿ ಗೌರವದೊಂದಿಗೆ ಗುರುಪ್ರಸಾದ್ ಅಂತ್ಯಕ್ರಿಯೆ
ನಕ್ಸಲ್ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಬಲಿಯಾದ ಕೊಡಗಿನ ಪೊಲೀಸ್ ಕಾನ್ಸ್‌‌ಟೇಬಲ್ ಗುರುಪ್ರಸಾದ್ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ಗುರುವಾರ ನೆರವೇರಿತು.

ಉಪಸಭಾಪತಿ ಕೆ.ಜಿ.ಬೋಪಯ್ಯ, ಕೆಎಸ್ಆರ್‌‌ಪಿ ಡಿಐಜಿ ಕೆಂಪಯ್ಯ, ಉಪ ಆಯುಕ್ತ ಬಲದೇವಕೃಷ್ಣ, ಪ್ರಧಾನ ಕಚೇರಿ ಸಹಾಯಕ ಚಿಕ್ಕತಮ್ಮಯ್ಯ ಹಾಗೂ ಎಸ್ಪಿ ಸುರೇಶ್ ಮೃತ ಗುರುಪ್ರಸಾದ್‌‌ಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಗುರುಪ್ರಸಾದ್ ಪಾರ್ಥಿವ ಶರೀರ ಬುಧವಾರ ರಾತ್ರಿ ಸುಮಾರು 10.15ಕ್ಕೆ ಮನೆ ತಲುಪುತ್ತಿದ್ದಂತೆ ಮನೆಯವರ ರೋದನ ಮುಗಿಲು ಮುಟ್ಟಿತ್ತು.

ನಕ್ಸಲರನ್ನು ಇಲಾಖೆ ಸಂಪೂರ್ಣವಾಗಿ ಹತ್ತಿಕ್ಕಲಿದೆ ಎಂದು ಡಿಐಜಿ ಕೆಂಪಯ್ಯ ಹೇಳಿದರು. ಮೃತ ಕಾನ್ಸ್‌‌ಟೇಬಲ್ ಕುಟುಂಬಕ್ಕೆ ಸರಕಾರ ಘೋಷಿಸಿರುವ 5 ಲಕ್ಷ ರೂ. ಶೀಘ್ರವೇ ತಲುಪಿಸಲಾಗುವುದು ಎಂದು ಅವರು ಹೇಳಿದರು.

ನರಹಂತಕ ಕಾಡುಗಳ್ಳ ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯಲ್ಲೂ ಗುರುಪ್ರಸಾದ್ ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾನೂನುಬಾಹಿರ ಬಂಧನ-ಠಾಣೆಗೆ ಐಜಿಪಿ ದಾಳಿ
ನ. 28: ಸರಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಬಂಗ್ಲೆ ನಿರ್ಮಾಣ: ಪ್ರತಿಪಕ್ಷಗಳಿಂದ ಅಪಸ್ವರ
ಆತ್ಮಹತ್ಯೆ:ಆರೋಪಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಎನ್‌ಕೌಂಟರ್: ಇಬ್ಬರು ನಕ್ಸಲ್‌ರ ಗುರುತು ಪತ್ತೆ
ನೀರಿಗೆ ಮೀಟರ್ ಕಡ್ಡಾಯ: ಕಟ್ಟಾ ಸುಬ್ರಹ್ಮಣ್ಯ