ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶ್ರೀರಾಮುಲು ಸಿಎಂ ಆಗುವುದು ಖಚಿತ: ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀರಾಮುಲು ಸಿಎಂ ಆಗುವುದು ಖಚಿತ: ರೆಡ್ಡಿ
ಶ್ರೀರಾಮುಲು ಈ ರಾಜ್ಯ ಮೆಚ್ಚುವಂತಹ ಮುಖ್ಯಮಂತ್ರಿಗಳಾಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಅವರು ವಾಲ್ಮೀಕಿ ಜನಾಂಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶ್ರೀರಾಮುಲು ಜಾತಿ ಮೀರಿ ಬೆಳೆದಿದ್ದಾರೆ. ದಲಿತ ಸಮುದಾಯಕ್ಕೆ ಖರ್ಗೆ, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಇದ್ದಂತೆ ವಾಲ್ಮೀಕಿ ಜನಾಂಗಕ್ಕೆ ಶ್ರೀರಾಮುಲು ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯ ಪ್ರವಾಸ ಮಾಡಿದ ಶ್ರೀರಾಮುಲು ಅನೇಕರ ಗೆಲುವಿಗೆ ಕಾರಣರಾಗಿದ್ದಾರೆ.

ಜಿಲ್ಲೆಯ ನಾಯಕರು ವಾಲ್ಮೀಕಿ ಜಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆದರೆ, ಇಂದು ನಮ್ಮ ಕುಟುಂಬ ರಾಜಕೀಯಕ್ಕೆ ಬಂದಿರುವುದೇ ಶ್ರೀರಾಮುಲುಗಾಗಿ, ಶ್ರೀರಾಮುಲು ಮಗುವಿನಂತಹ ಮನಸ್ಸುಳ್ಳವರು. ಯಾವ ಕಲ್ಮಶವೂ ಇಲ್ಲ ಎಂದರು.

ಬಳ್ಳಾರಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ವಾಲ್ಮೀಕಿ ಭವನವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಸರಕಾರ ಇದಕ್ಕೆ 1 ಕೋಟಿ ರೂ. ನೀಡಲಿದೆ. ಉಳಿದ ಹಣವನ್ನು ನಾವೇ ಸೇರಿ ಹಾಕುತ್ತೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿ. 27ರಂದು ವಿಧಾನಸಭಾ ಉಪಚುನಾವಣೆ
ನಕ್ಸಲರಿಂದ ಪೊಲೀಸರಿಗೆ ಬಹಿರಂಗ ಪತ್ರ
ಕ್ಯಾಟ್‌ವಾಕ್ ಮಾಡಿದ ಇನ್ಸ್‌ಪೆಕ್ಟರ್ ಅಮಾನತು
ಚುನಾವಣೆ: ಶೀಘ್ರವೇ ಅಭ್ಯರ್ಥಿಗಳ ಪಟ್ಟಿ - ಡಿ.ವಿ.
ಉಪಚುನಾವಣೆ ಮುಂದೂಡಿಕೆಗೆ ಕೇಂದ್ರದ ಹುನ್ನಾರ: ನಾಯಕ್
ಚರ್ಚ್ ಸ್ಫೋಟ: ನ.28ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ