ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೊಲೀಸ್‌ ವ್ಯವಸ್ಥೆಗೆ ಬಲತುಂಬಬೇಕಿದೆ: ಶ್ರೀಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸ್‌ ವ್ಯವಸ್ಥೆಗೆ ಬಲತುಂಬಬೇಕಿದೆ: ಶ್ರೀಕುಮಾರ್
ಭಯೋತ್ಪಾದನೆ ಪಿಡುಗನ್ನು ಸಮರ್ಥವಾಗಿ ಎದುರಿಸಬೆಕಾದರೆ, ಪೊಲೀಸ್ ಕಾಯ್ದೆಗೆ ಸಮಗ್ರ ತಿದ್ದುಪಡಿ ಅಗತ್ಯವಿದೆ ಎಂದು ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಗೃಹರಕ್ಷಕ ದಳ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ, ಐಆರ್ಡಿಸಿ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ನಗರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನವ ನಿರ್ಮಿತ ಕೃತಕ ವಿಪತ್ತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಂಸತ್ ಮೇಲಿನ ದಾಳಿಯಲ್ಲಿ ನಿಷೇಧಿತ ದೀನ್ದಾರ್ ಅಂಜುಮಾನ್ ಸಂಘಟನೆ ಕೈವಾಡವಿರುವುದು ಸ್ಪಷ್ಟವಾಗಿದೆ. ಹಾಗೂ ಮುಂಬೈ ದಾಳಿಗೆ ಲಷ್ಕರೆ-ಎ-ತೊಯ್ಬಾ ಸಂಘಟನೆಯ ಬೆಂಬಲವಿರುವುದು ಬಹಿರಂಗಗೊಂಡಿದೆ. ಪಾಕಿಸ್ತಾನದ ಮೇಲೆ ಒತ್ತಡ ತಂದು ಈ ಸಂಘಟನೆಗಳ ಮುಖಂಡರನ್ನು ಭಾರತದ ವಶಕ್ಕೆ ತೆಗೆದುಕೊಳ್ಳಬೇಕು ಎಂದರು.

ಭಯೋತ್ಪಾದನೆಯಲ್ಲಿ ಭಾಗಿಯಾದವರನ್ನು ನಾವು ಬಂಧಿಸುತ್ತಿದ್ದೇವೆಯೇ ಹೊರತು ಅವರಿಗೆ ಯಾವುದೇ ಉಗ್ರ ಶಿಕ್ಷೆ ವಿಧಿಸಿಲ್ಲ ಎಂದು ವಿಷಾದಿಸಿದ ಶ್ರೀಕುಮಾರ್, ಕಾನೂನಿನಲ್ಲಿ ತಿದ್ದುಪಡಿ ತಂದು ಪೊಲೀಸ್ ವ್ಯವಸ್ಥೆಗೆ ಬಲ ತುಂಬಬೇಕಿದೆ. ಜೊತೆಗೆ ಜನತೆ ಭಯೋತ್ಪಾದನೆಯನ್ನು ನೋಡುವ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡಿದರೆ ಹಾಗೂ ಭಯೋತ್ಪಾದನೆ ದಾಳಿಯಂತಹ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಸುಧಾರಣೆ ತರಬಹುದು. ತುರ್ತುಸೇವಾ ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಮುನ್ನುಗ್ಗಿದಾಗ ಮಾತ್ರ ಭಯೋತ್ಪಾದನೆಯನ್ನು ಮಟ್ಟಹಾಕಬಹುದು ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿರೆಡ್ಡಿ ಸಹೋದರರ ವಜಾಗೆ ಆಗ್ರಹ
ಯುಪಿಎ ಜಾಹೀರಾತು ವಿರುದ್ಧ ಚು.ಆಯೋಗಕ್ಕೆ ದೂರು
ಪ್ರತಿಪಕ್ಷಗಳಿಗೆ ಟೀಕೆ ನಡೆಸುವುದೇ ಕಾಯಕ: ಸಿಎಂ
ಸಿಎಂ ತೀರ್ಥಯಾತ್ರೆಗೆ ಧರಂ ಶಿಫಾರಸ್ಸು
ಪ್ರಚಾರಕ್ಕೆ ಬರದ ಮಂಡ್ಯದ ಗಂಡು
ಆರ್.ವಿ ತನ್ನ ಹಿನ್ನೆಲೆ ಕೆದಕಿಕೊಳ್ಳಲಿ: ಧನಂಜಯ