ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸದನ ಖಾಲಿ...ಖಾಲಿ...ಶಾಸಕರು ಸ್ವಕ್ಷೇತ್ರದತ್ತ ಪ್ರಯಾಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದನ ಖಾಲಿ...ಖಾಲಿ...ಶಾಸಕರು ಸ್ವಕ್ಷೇತ್ರದತ್ತ ಪ್ರಯಾಣ
ಗಡಿನಾಡಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಶನಿವಾರ ಸದನದಲ್ಲಿ ಬೆಳಿಗ್ಗೆ ಲವಲವಿಕೆಯಿಂದ ಕಾಣಿಸಿಕೊಂಡಿದ್ದ ಶಾಸಕರು, 12ಗಂಟೆ ಕಳೆಯುತ್ತಿದ್ದಂತೆಯೇ ಅಧಿವೇಶನದಲ್ಲಿ ಖಾಲಿ ಕುರ್ಚಿಗಳೆದ್ದೇ ದರ್ಬಾರು!, ಬಹುತೇಕ ಸದಸ್ಯರು ಎರಡು ಸದನಗಳಿಗೆ ಗೈರು ಹಾಜರಾಗಿ ಸ್ವಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದರ ಪರಿಣಾಮ ಇದು.

ಪತ್ನಿ ಮಕ್ಕಳು ಸಂಸಾರ ಸಮೇತ ಬೆಳಗಾವಿಗೆ ಬಂದಿದ್ದ ಶಾಸಕರು ಕೊಠಡಿ ಖಾಲಿ ಮಾಡಿ ಕ್ಷೇತ್ರಗಳತ್ತ ತೆರಳುತ್ತಿದ್ದರಿಂದ ಹೋಟೆಲ್‌‌ಗಳು ಖಾಲಿ, ಖಾಲಿಯಾಗಿದ್ದವು.

ಜನದಟ್ಟಣೆಯಿಂದ ಕಳೆದೊಂದು ವಾರದಿಂದ ತುಂಬಿ ತುಳುಕುತ್ತಿದ್ದ ಕುಂದಾನಗರಿಯ ಹೋಟೆಲ್‌‌, ರಸ್ತೆಗಳು ಎಂದಿನ ಸ್ಥಿತಿಗೆ ಮರಳಿದವು.
ಉತ್ತರಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದ ಶಾಸಕರನ್ನು ಹೊರತುಪಡಿಸಿ ಮೈಸೂರು ಭಾಗದ ಬಹುತೇಕ ಶಾಸಕರು ಸದನಕ್ಕೆ ಗೈರುಹಾಜರಾಗಿ ಮನೆಯತ್ತ ಪಯಣ ಬೆಳೆಸಿದ್ದರು.

ಇದರಿಂದಾಗಿ ಸದನದಲ್ಲಿ ನಿನ್ನೆ-ಮೊನ್ನೆ ನಡೆದ ಗದ್ದಲ, ಗೌಜಿ ಕಂಡು ಬರಲಿಲ್ಲ, ಉತ್ತರ ಕರ್ನಾಟಕ ಅಭಿವೃದ್ದಿಗಾಗಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳು ಸಹ ನೀರಸವಾಗಿದ್ದವು.

ಸದಸ್ಯರ ಕಡಿಮೆ ಹಾಜರಾತಿಯಲ್ಲೂ ರಾಜ್ಯಪಾಲರ ಭಾಷಣದ ಮೇಲೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುವ ಖರ್ಗೆ, ಕುಮಾರಸ್ವಾಮಿ, ಮತ್ತಿತರರು ಮಾತನಾಡಿದರು. ಕೊನೆಯ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ ನಂತರ ಸದನದ ಕಲಾಪಕ್ಕೆ ತೆರೆ ಬಿದ್ದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಧಿವೇಶನಕ್ಕೆ ತೆರೆ: ಅಭಿವೃದ್ದಿಗೆ ಸರ್ಕಾರ ಬದ್ದ-ಸಿಎಂ
'ಸುರಕ್ಷತೆ'ಗೆ ಪೊಲೀಸ್ ಜತೆ ಕೈಜೋಡಿಸಿದ ಹೊಟೇಲ್ ಸಂಘ
ಮತ್ತೆ ಗಣಿ ತನಿಖೆ: ನ್ಯಾ.ಸಂತೋಷ್ ಹೆಗ್ಡೆ ಕಿಡಿ
ಕಾಂಗ್ರೆಸ್‌‌ನಲ್ಲಿದ್ದರೆ ಮಾತ್ರ ಸಿದ್ದು ಸಿಎಂ: ದೇಶಪಾಂಡೆ
ಒಬಾಮ 'ಚಹಾಕೂಟ'ದಲ್ಲಿ ಸಾಂಗ್ಲಿಯಾನ ಅತಿಥಿ
ಬೆಂಗಳೂರು: ಭೀಕರ ಅಪಘಾತಕ್ಕೆ ನಾಲ್ವರು ಬಲಿ