ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸೇತುವೆ ಕುಸಿತ: ಎರಡು ಮೃತದೇಹ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇತುವೆ ಕುಸಿತ: ಎರಡು ಮೃತದೇಹ ಪತ್ತೆ
ಹಂಪೆಯ ಆನೆಗೊಂದಿಯಲ್ಲಿನ ತುಂಗಾಭದ್ರಾ ನದಿ ಪಾಲಾದ ನಿರ್ಮಾಣ ಹಂತದಲ್ಲಿದ್ದ ತೂಗು ಸೇತುವೆ ಕುಸಿತಕ್ಕೆ ಸಿಲುಕಿದ್ದ ಇಬ್ಬರು ಕಾರ್ಮಿಕರ ದೇಹಗಳು ಶನಿವಾರ ದೊರಕಿದೆ.

ಮೃತದೇಹಗಳನ್ನು ವೆಂಕಟಾಪುರದ ಹುಲಗೆಪ್ಪ ಹಾಗೂ ಗಾರಿ ನಿಂಗಪ್ಪ ಎಂಬುವರ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇನ್ನೂ ಏಳು ಕಾರ್ಮಿಕರ ಮೃತದೇಹಕ್ಕಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಮೋಹನ್ ಚಕ್ರವರ್ತಿ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿದ್ದ ಆನೆಗೊಂದಿ ತೂಗು ಸೇತುವೆ ಗುರುವಾರ ರಾತ್ರಿ ಕುಸಿದು ಬಿದ್ದಿತ್ತು. ಆ ಸಂದರ್ಭದಲ್ಲಿ 36ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಆದರೆ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆಯುವಲ್ಲಿ ಜಿಲ್ಲಾಡಳಿತ ಕಳೆದ ಮೂರು ದಿನಗಳಿಂದ ಹರಸಾಹಸಪಡುತ್ತಿದ್ದು, ಇಂದು ಎರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಲ್ಬರ್ಗಾದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಶ
ಕೋಲಾರ: ತಿಪ್ಪೆಯಲ್ಲಿ ನಿಗೂಢ ಸ್ಫೋಟ
ಸದನ ಖಾಲಿ...ಖಾಲಿ...ಶಾಸಕರು ಸ್ವಕ್ಷೇತ್ರದತ್ತ ಪ್ರಯಾಣ
ಅಧಿವೇಶನಕ್ಕೆ ತೆರೆ: ಅಭಿವೃದ್ದಿಗೆ ಸರ್ಕಾರ ಬದ್ದ-ಸಿಎಂ
'ಸುರಕ್ಷತೆ'ಗೆ ಪೊಲೀಸ್ ಜತೆ ಕೈಜೋಡಿಸಿದ ಹೊಟೇಲ್ ಸಂಘ
ಮತ್ತೆ ಗಣಿ ತನಿಖೆ: ನ್ಯಾ.ಸಂತೋಷ್ ಹೆಗ್ಡೆ ಕಿಡಿ