ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಬ್‌‌ಗೆ ದಾಳಿ: ಶ್ರೀರಾಮಸೇನೆಯ 10 ಮಂದಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಬ್‌‌ಗೆ ದಾಳಿ: ಶ್ರೀರಾಮಸೇನೆಯ 10 ಮಂದಿ ಬಂಧನ
ನಗರದ ಬಲ್ಮಠ ಸಮೀಪದ ಪಬ್‌ವೊಂದರ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ 10ಮಂದಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಲ್ಮಠದಲ್ಲಿರುವ ಅಮ್ನೇಶಿ ಪಬ್‌ವೊಂದರಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಅರೆಬೆತ್ತಲೆ ನರ್ತನ ಮಾಡುತ್ತಿರುವ ಬಗ್ಗೆ ಮಾಲೀಕರಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು ತಕ್ಷಣವೇ ಅವರನ್ನು ಹೊರ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಪಬ್‌ನಿಂದ ನರ್ತನ ಮಾಡುತ್ತಿದ್ದವರನ್ನು ಹೊರಕಳುಹಿಸಲು ಮಾಲೀಕರು ನಕಾರ ವ್ಯಕ್ತಪಡಿಸಿದಾಗ, ಶ್ರೀರಾಮ ಸೇನೆಯ ಕಾರ್ಯಕರ್ತರು ಪಬ್‌ ಒಳಗೆ ನುಗ್ಗಿ ನರ್ತನದಲ್ಲಿ ತೊಡಗಿದ್ದವರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದರು.

ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಈ ಘಟನೆ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಇದೀಗ ಪಬ್ ಮಾಲೀಕರು ದೂರು ದಾಖಲಿಸಿದ್ದು, ಶ್ರೀರಾಮ ಸೇನೆಯ ಹತ್ತು ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
10 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನಕಲಿ ವೀಸಾ ಜಾಲ
ಯಡಿಯೂರಪ್ಪ ಪುತ್ರಗೆ ಟಿಕೆಟ್‌‌ಗೆ ಒತ್ತಾಯ
ರಾಷ್ಟ್ರಪತಿ ಸೇವಾಪದಕ
ಮಹಾಜನ ವರದಿ ಜಾರಿ ಒತ್ತಾಯ
ಸೇತುವೆ ಕುಸಿತ: ಎರಡು ಮೃತದೇಹ ಪತ್ತೆ
ಗುಲ್ಬರ್ಗಾದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಶ