ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮದ್ಯಸೇವನೆ ಮಾಡಿದ್ದೇ ಅಪಘಾತಕ್ಕೆ ಕಾರಣ:ಕಾರ್ತಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮದ್ಯಸೇವನೆ ಮಾಡಿದ್ದೇ ಅಪಘಾತಕ್ಕೆ ಕಾರಣ:ಕಾರ್ತಿಕ್
ಯರ್ರಾಬಿರ್ರಿ ಕಾರು ಚಾಲನೆ ಮಾಡಿ ನಾಲ್ಕು ಮಂದಿಯ ಸಾವಿಗೆ ಕಾರಣನಾದ ಕಾರ್ತಿಕ್ ಕೆ.ಸೋಮಯ್ಯ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ಸ್ನೇಹಿತರೊಂದಿಗೆ ಮಧ್ಯ ಸೇವಿಸಿರುವುದಾಗಿ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.

ಕಾರ್ತಿಕ್‌‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಯನ್ನು ಮಂಗಳವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ತಿಕ್ ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆಯ ನಿವಾಸಿಯಾಗಿದ್ದು, ನಗರದ ಕೋರಮಂಗಲ ದೊಮ್ಮಲೂರು ಎಂ.ಐ.ಜಿ ಬ್ಲಾಕ್‌‌ನಮನೆಯೊಂದರಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ. ಕೋರಮಂಗಲದ 141 ಚೆರಕಾನ್ ಕಂಪೆನಿಯಲ್ಲಿ ಆಪರೇಷನಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಮಧ್ಯರಾತ್ರಿಯವರೆಗೂ ಇಂದಿರಾನಗರದ ಕ್ಲಬ್‌‌ನಲ್ಲಿ ಕಂಠಪೂರ್ತಿ ಮದ್ಯ ಪಾನ ಮಾಡಿದ್ದರು. ಅಲ್ಲದೇ, ಆ ರಾತ್ರಿ ಆತ ನಿದ್ರೆ ಮಾಡದೆ ಸ್ನೇಹಿತರೊಡನೆ ಹರಟಿದ್ದ ಎಂದು ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಮುಂಜಾನೆಯವರೆಗೆ ಕೋರಮಂಗಲದಲ್ಲಿದ್ದ ಆರೋಪಿ ಬೆಳಿಗ್ಗೆ ಇಂದಿರಾನಗರದ ಮತ್ತೊಬ್ಬ ಸ್ನೇಹಿತನ ಮನೆಗೆ ಉಪಾಹಾರ ಸೇವನೆ ಮಾಡಲು ಆತುರವಾಗಿ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಾಯುವಿಹಾರಕ್ಕೆ ತೆರಳಿದ್ದವರು ಮೇಲೆ ಹರಿದಿದೆ.

ಆರೋಪಿ ಮದ್ಯಪಾನ ಮಾಡಿ 24 ಗಂಟೆ ನಂತರ ಇದರ ನಶೆ ಇಳಿದಿರಲಿಲ್ಲ. ಇದು ವೈದ್ಯಕೀಯ ತಪಾಸಣೆಯಲ್ಲೂ ದೃಢಪಟ್ಟಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ಕಿಡಿ
ಸಿದ್ದು - ಸಿಎಂ ಅಕ್ಕಪಕ್ಕ ವದಂತಿಗಳಿಗೆ ರೆಕ್ಕೆಪುಕ್ಕ
ಪಬ್‌‌ಗೆ ದಾಳಿ: ಶ್ರೀರಾಮಸೇನೆಯ 10 ಮಂದಿ ಬಂಧನ
10 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನಕಲಿ ವೀಸಾ ಜಾಲ
ಯಡಿಯೂರಪ್ಪ ಪುತ್ರಗೆ ಟಿಕೆಟ್‌‌ಗೆ ಒತ್ತಾಯ
ರಾಷ್ಟ್ರಪತಿ ಸೇವಾಪದಕ