ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಮನಗರ: ಮೂವರ ಮೇಲೆ ಚಿರತೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮನಗರ: ಮೂವರ ಮೇಲೆ ಚಿರತೆ ದಾಳಿ
ರಾಮನಗರದ ಸಾವದುರ್ಗ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟ ಚಿರತೆಯೊಂದು ಬ್ಯಾಡರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಹಲವರನ್ನು ಗಾಯಗೊಳಿಸಿದೆ. ಇಲ್ಲಿನ ಅಂಜನಾ ನಗರಕ್ಕೆ ನುಗ್ಗಿದ ಚಿರತೆ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ.

ಕೆಂಪೇಗೌಡ ನಗರದ ಪ್ರಕಾಶ್, ಕುಮಾರ್ ಹಾಗೂ ಐಎಂಬಿಎ ಲೇಔಟ್ ನಿವಾಸಿ ಹರ್ಷ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಜನಾನಗರ ಕೆಂಪೇಗೌಡ ನಗರದಲ್ಲಿ ರಾತ್ರಿ ಊಟ ಮುಗಿಸಿ ಸ್ನೇಹಿತನ ಮನೆಗೆ ತೆರಳುತ್ತಿದ್ದ ಪ್ರಕಾಶ್ ಎಂಬುವರ ಮೇಲೆ ಇದಕ್ಕಿದ್ದಂತೆ ಚಿರತೆ ದಾಳಿ ನಡೆಸಿತ್ತು. ರಸ್ತೆಯ ದೂರದಲ್ಲಿ ನಿಂತಿದ್ದ ಆಟೋ ಚಾಲಕ ಕುಮಾರ್ ಎಂಬಾತನ ಮೇಲೂ ಎಗರಿ ದಾಳಿ ನಡೆಸಿ ಪರಾರಿಯಾಯಿಗಿತ್ತು.

ಕೆಂಪೇಗೌಡನಗರದಲ್ಲಿ ಎರಡನೆ ದಾಳಿಗೆ ಒಳಗಾದ ಕುಮಾರ್ ಚಿರತೆ ದಾಳಿಯನ್ನು ಸುತ್ತಲ ಜನರಿಗೆ ತಿಳಿಸಿದರು. ಕೂಡಲೇ ಜಾಗೃತರಾದ ಜನ ಪಂಜಿನ ಮೂಲಕ ಚಿರತೆಯ ಶೋಧ ನಡೆಸಲು ಆರಂಭಿಸಿದರು. ಆಗ ಬೆಂಗಳೂರು-ಮಾಗಡಿ ಮುಖ್ಯ ರಸ್ತೆಯನ್ನು ದಾಟಿದ ಚಿರತೆ ರಸ್ತೆ ಪಕ್ಕದಲ್ಲಿ ಬೈಕ್‌‌ನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹರ್ಷ ಎಂಬ ಯುವಕನ ಮೇಲೆ ದಾಳಿ ಮಾಡಿತು. ಆತನ ಹೆಗಲು ಹಾಗೂ ಕೈಗಳನ್ನು ಪರಚಿ ಗಾಯಗೊಳಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಶೋಧ ನಡೆಸಿದರೂ ಚಿರೆತೆ ಪತ್ತೆಯಾಗಲಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಪರೇಶನ್ ಕಮಲ ಮುಂದುವರಿಯಲಿದೆ: ಸದಾನಂದಗೌಡ
ಬಸವರಾಜು ಹೇಳಿಕೆಗೆ ತರಳಬಾಳುಶ್ರೀ ತೀಕ್ಷ್ಣ ಪ್ರತಿಕ್ರಿಯೆ
ಪಬ್ ದಾಳಿಯ ಹಿಂದೆ ಕಾಂಗ್ರೆಸ್ ಪಿತೂರಿ: ಆಚಾರ್ಯ
ಮುತಾಲಿಕ್ ಭಯೋತ್ಪಾದಕ: ಅನಂತಮೂರ್ತಿ
ಆಂದೋಲನ ನಿಲ್ಲಿಸುವುದಿಲ್ಲ: ಲಿಂಬಾವಳಿ
ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣ: ಯಡಿಯೂರಪ್ಪ