ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗೊಂದಲ-ಪ್ರತಿಭಟನೆಯ ನಡುವೆ 'ಅಕ್ಷರ ಜಾತ್ರೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೊಂದಲ-ಪ್ರತಿಭಟನೆಯ ನಡುವೆ 'ಅಕ್ಷರ ಜಾತ್ರೆ'
ಪೊಲೀಸ್ ರಕ್ಷಣೆ ಪಡೆದ ನಲ್ಲೂರು ಪ್ರಸಾದ್‌...
ಕೋಟೆಯ ನಾಡಲ್ಲಿ ನಡೆಯುತ್ತಿರುವ 75ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಗೊಂದಲದ ಬೀಡಾಗುವ ಮೂಲಕ ಅವ್ಯವಸ್ಥೆಯಿಂದಾಗಿ ಸಾಹಿತ್ಯಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಪ್ರತಿಭಟನೆ ಎದುರಿಸಲಾಗಿದೆ ಪೊಲೀಸ್ ರಕ್ಷಣೆ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು.

ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನವಾದ ಶುಕ್ರವಾರ ಬೆಳಿಗ್ಗಿನಿಂದಲೇ ಅಸಮಾಧಾನ ಭುಗಿಲೆದ್ದಿತು. ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳು ರೊಚ್ಚಿಗೆದ್ದು ರಸ್ತೆಗಿಳಿದು ಬೆಳಿಗ್ಗೆಯಿಂದ ಮಧ್ನಾಹ್ನದವರೆಗೂ ಪ್ರತಿಭಟನೆ ನಡೆಸಿದರು.

ಸಂಘಟಕರ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ವಸತಿ, ಊಟದ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದು, 200ರೂ. ನೀಡಿದರೂ ಕಿಟ್ ನೀಡುತ್ತಿಲ್ಲ, ಒಒಡಿ ಪ್ರಮಾಣ ಪತ್ರವನ್ನೂ ನೀಡುತ್ತಿಲ್ಲ. ನಾವು ಇಲ್ಲಿನ ಅವ್ಯವಸ್ಥೆಯಿಂದಾಗಿ ಇರುವಂತೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಗಮಿಸಿದ ವೀರೇಶ್ ಅವರಿಗೆ ದಿಗ್ಭಂಧನ ಹಾಕಲಾಯಿತು, ಅವರನ್ನು ಹಿಗ್ಗಾಮುಗ್ಗಾ ಎಳೆದಾಡಲಾಯಿತು, ಅಷ್ಟರಲ್ಲಿ ಅಪಾಯವನ್ನರಿತ ಅವರು ತಮ್ಮ ವಾಹನದಲ್ಲಿ ಪರಾರಿಯಾದರು. ಬಳಿಕ ಕೇಂದ್ರ ಕಸಾಪ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಅವರು ಪ್ರತಿಭಟನೆ ಎದುರಿಸಬೇಕಾಯಿತು. ಅವಾಚ್ಯ ಶಬ್ದಗಳಿಂದ ನಲ್ಲೂರ್‌ಗೆ ಧಿಕ್ಕಾರ ಕೂಗಲಾಯಿತು. ಪೊಲೀಸರು ಮಧ್ಯಪ್ರವೇಶಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಅಂತೂ ಅವ್ಯವಸ್ಥೆಯ ಆಗರವಾದ 75ನೇ ಕನ್ನಡ ಸಮ್ಮೇಳನದಲ್ಲಿ ಸಂಘಟಕರು ಕಿಟ್ ವಿತರಿಸಲಾಗದೆ 200ರೂಪಾಯಿಗಳನ್ನು ವಾಪಸ್ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಠಾಧೀಶರನ್ನು ಯಾಕೆ ಟೀಕಿಸಬಾರದು?: ಕಿ.ರಂ
ನಟ ವಿನೋದ್‌ರಾಜ್ ಹತ್ಯೆಗೆ ಯತ್ನ
ಮಂಗಳೂರಿನಲ್ಲಿ ಮತ್ತೆ ಶ್ರೀರಾಮ ಸೇನೆ ದಾಂಧಲೆ
ಭಯೋತ್ಪಾದನೆ ನಿಗ್ರಹ ದಳ ಅಗತ್ಯ: ಕಲಾಂ
ಗುಟ್ಕಾ ನಿಷೇಧಕ್ಕೆ 1 ವಾರ ಹೈಕೋರ್ಟ್ ತಡೆಯಾಜ್ಞೆ
ಬಿಜೆಪಿ ವಿರುದ್ಧ ರಣಕಹಳೆ: ಡಿ.ಕೆ.ಶಿವಕುಮಾರ್