ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: ಮತ್ತೆ ಚಿರತೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಮತ್ತೆ ಚಿರತೆ ದಾಳಿ
ನಗರದಲ್ಲಿ ಬುಧವಾರ ರಾತ್ರಿ ಮೂವರ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ ಶುಕ್ರವಾರ ಮುಂಜಾನೆ ಮತ್ತೆ ಕಡಬಗೆರೆಯಲ್ಲಿ ಪ್ರತ್ಯಕ್ಷವಾಗಿ ಇಬ್ಬರ ಮೇಲೆ ದಾಳಿ ನಡೆಸಿದೆ.

ನೆಲಮಂಗಲ ವ್ಯಾಪ್ತಿಯ ರಾಶಿ ಅಪಾರ್ಟ್‌ಮೆಂಟ್ ಕಾವಲುಗಾರ ಶಿವರುದ್ರಯ್ಯ(45) ಹಾಗೂ ಬಾಲಕ ಸುನಿಲ್ (14) ಗಾಯಗೊಂಡಿದ್ದಾರೆ. ಇದರಿಂದಾಗಿ ಉದ್ಯಾನ ನಗರಿಯ ಜನತೆ ದಿಗಿಲುಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಕಡಬಗೆರೆಯ ಸುನಿಲ್ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಾಗ ಚಿರತೆ ಆತನ ಮೇಲೆರಗಿ ಪರಾರಿಯಾಗಿತ್ತು. ಬಾಲಕನ ಬಲ ತೋಳಿನಲ್ಲಿ ಪರಚಿದ ಗಾಯಗಳಾಗಿವೆ. ನಂತರ ರಾಶಿ ಅಪಾರ್ಟ್‌ಮೆಂಟ್ ಬಳಿ ಕಾಣಿಸಿಕೊಂಡ ಚಿರತೆ ಕಾವಲುಗಾರ ಶಿವರುದ್ರಯ್ಯ ದೀಪ ಆರಿಸಲೆಂದು ಹೊರಗೆ ಬಂದಾಗ ಅವರ ಮೇಲೆ ಎರಗಿ ಅಲ್ಲಿಂದ ಪರಾರಿಯಾಗಿದೆ.

ನಗರಕ್ಕೆ ಬಂದಿರುವ ಚಿರತೆ ಮನುಷ್ಯರನ್ನೇ ಬೇಟೆಯಾಡಲು ಮುಂದಾದರೆ ಅದನ್ನು ಗುಂಡಿಟ್ಟು ಸಾಯಿಸುವುದಾಗಿ ಬೆಂಗಳೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಜಿ.ಶಿವಾನಂದಮೂರ್ತಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಡುಪಿ: ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ?
ಗೊಂದಲ-ಪ್ರತಿಭಟನೆಯ ನಡುವೆ 'ಅಕ್ಷರ ಜಾತ್ರೆ'
ಮಠಾಧೀಶರನ್ನು ಯಾಕೆ ಟೀಕಿಸಬಾರದು?: ಕಿ.ರಂ
ನಟ ವಿನೋದ್‌ರಾಜ್ ಹತ್ಯೆಗೆ ಯತ್ನ
ಮಂಗಳೂರಿನಲ್ಲಿ ಮತ್ತೆ ಶ್ರೀರಾಮ ಸೇನೆ ದಾಂಧಲೆ
ಭಯೋತ್ಪಾದನೆ ನಿಗ್ರಹ ದಳ ಅಗತ್ಯ: ಕಲಾಂ