ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು ಸರಣಿ ಸ್ಫೋಟ: 9 ಆರೋಪಿಗಳ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು ಸರಣಿ ಸ್ಫೋಟ: 9 ಆರೋಪಿಗಳ ಸೆರೆ
ಬಂಧಿತರು ಕೇರಳದ ಮೂಲದವರು...
NRB
ಉದ್ಯಾನನಗರಿಯನ್ನು ಕಳೆದ ವರ್ಷ ಬೆಚ್ಚಿ ಬೀಳಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ 9ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಡಿಜಿಪಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

2008ರ ಜುಲೈ 25ರಂದು ಸಿಲಿಕಾನ್ ಸಿಟಿಯ ಎಂಟು ಸ್ಥಳಗಳಲ್ಲಿ 9 ಸ್ಫೋಟ ಸಂಭವಿಸುವ ಮೂಲಕ ರಾಜ್ಯದ ಜನರು ಬೆಚ್ಚಿ ಬೀಳುವಂತಾಗಿತ್ತು. ಈ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದರು.

ಬಂಧಿತ ಉಗ್ರ ಅಬ್ದುಲ್ ಸತ್ತಾರ್ ನೀಡಿದ ಮಾಹಿತಿ ಮೇರೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹಾಗೂ ಸಿಸಿಬಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೇರಳ ಮೂಲದ 9ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಕಮೀಷನರ್ ಶಂಕರ ಬಿದರಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರ ನೀಡಿದರು.

NRB
ಬಂಧಿತರನ್ನು ಅಬ್ದುಲ್ ಸತ್ತಾರ್, ಮುಜೀಬ್, ಅಬ್ದುಲ್ ಜಿಲಾಲ್, ಮುನಾಫ್, ಸರ್ಪುದ್ದೀನ್, ಅಬ್ದುಲ್ ಜಬ್ಬಾರ್, ಬದ್ರುದ್ದೀನ್ ಹಾಗೂ ಶಾದೀಲ್, ಸಕಾರಿಯಾ ಎಂದು ಗುರುತಿಸಲಾಗಿದೆ.

ಕೇಂದ್ರ ಸರ್ಕಾರ ಗುಪ್ತಚರ ಇಲಾಖೆ, ರಾಜ್ಯದ ಸಿಓಡಿ, ಸಿಸಿಬಿ, ಗೋಪಾಲ್ ಹೊಸೂರು, ನಿವೃತ್ತ ಡಿಜಿಪಿ ಶ್ರೀಕುಮಾರ್, ಕೇರಳ, ಆಂಧ್ರಪ್ರದೇಶ ಪೊಲೀಸರು ಸೇರಿದಂತೆ ಹಲವು ಇಲಾಖೆಯ ನೆರವಿನೊಂದಿಗೆ ತನಿಖೆಯನ್ನು ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂದೇ ಕುಟುಂಬದ ನಾಲ್ವರ ಸೇರಿ ಐವರ ಹತ್ಯೆ
ಶಾಸಕರ ಪುತ್ರಿ ಹಲ್ಲೆ ಪ್ರಕರಣ: ಇಬ್ಬರ ಬಂಧನ
ಬೆಂಗಳೂರು: ಮತ್ತೆ ಚಿರತೆ ದಾಳಿ
ಉಡುಪಿ: ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ?
ಗೊಂದಲ-ಪ್ರತಿಭಟನೆಯ ನಡುವೆ 'ಅಕ್ಷರ ಜಾತ್ರೆ'
ಮಠಾಧೀಶರನ್ನು ಯಾಕೆ ಟೀಕಿಸಬಾರದು?: ಕಿ.ರಂ