ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾಧ್ಯಮಗಳಿಗೆ ಅಂಕುಶ ಹಾಕಲು ಚಿಂತನೆ: ಆಚಾರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಧ್ಯಮಗಳಿಗೆ ಅಂಕುಶ ಹಾಕಲು ಚಿಂತನೆ: ಆಚಾರ್ಯ
ಅತಿ ರಂಜಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಒಂಬುಡ್ಸ್‌ಮನ್‌ (ಮಾಧ್ಯಮ ಧರ್ಮಾಧಿಕಾರಿ) ನೇಮಕ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ಗೃಹಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರೇ ನೀಡಿದ ಸಲಹೆ ಮೇರೆಗೆ ಈ ಚಿಂತನೆ ನಡೆಸಲಾಗುತ್ತಿದೆ. ಇದು ತನ್ನ ನಿರ್ಧಾರವಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದ ಆಚಾರ್ಯ, ತಾನು ದೀನ್ ದಯಾಳ್ ಉಪಾಧ್ಯಾಯರ ಶಿಷ್ಯನಾಗಿದ್ದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ದನಾಗಿದ್ದೇನೆ. ಆದರೆ ಬೇರೆ, ಬೇರೆ ಕಡೆಯಿಂದ ಮಾಧ್ಯಮಗಳಿಗೆ ಕಡಿವಾಣ ಹಾಕಿ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಮುಖ್ಯವಾಗಿ ದೃಶ್ಯ ಮಾಧ್ಯಮಗಳು ಅತಿರಂಜಿತ ವರದಿಯನ್ನು ನೀಡುತ್ತಿವೆ ಎಂದು ದೂರಿದ ಅವರು, ಈ ಹಿಂದಿನ ಪದ್ಮಪ್ರಿಯಾ ಪ್ರಕರಣವನ್ನು ಉಲ್ಲೇಖಿಸಿದರು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿ ಮಾಧ್ಯಮಗಳಿಗೆ ಅಂಕುಶ ಹಾಕಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮಾಧ್ಯಮಗಳ ವರದಿ ಬಗ್ಗೆ ಕ್ರಮ ಕೈಗೊಳ್ಳಲು ಪ್ರೆಸ್ ಕೌನ್ಸಿಲ್ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಎಲ್ಲಿದೆ ಸ್ವಾಮಿ ಪ್ರೆಸ್ ಕೌನ್ಸಿಲ್, ಅದಿದ್ದರೆ ಹೀಗಾಗುತ್ತಿತ್ತಾ? ಎಂಬುದಾಗಿ ಮರುಪ್ರಶ್ನಿಸಿದರು.

ಆಚಾರ್ಯ ಹೇಳಿಕೆಗೆ ಎಂ.ಪಿ.ಪ್ರಕಾಶ್ ಟೀಕೆ: ಮಾಧ್ಯಮಗಳ ಮೇಲೆ ಒಂಬುಡ್ಸ್‌ಮನ್ ನೇಮಕ ಮಾಡುವ ಹೇಳಿಕೆ ಕುರಿತು ಕಾಂಗ್ರೆಸ್ ಮುಖಂಡ ಎಂ.ಪಿ.ಪ್ರಕಾಶ್ ಟೀಕಿಸಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರ ಫ್ಯಾಸಿಸ್ಟ್ ರೀತಿಯಲ್ಲಿ ವರ್ತಿಸುತ್ತಿದೆ . ಮಾಧ್ಯಮಗಳು ತಪ್ಪು ಮಾಡಿದಲ್ಲಿ ಅದನ್ನು ಪ್ರಶ್ನಿಸಲು,ಛೀಮಾರಿ ಹಾಕಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಆಡಳಿತಾರೂಢ ಪಕ್ಷಕ್ಕೆ ಟೀಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂಬ ನಿಟ್ಟಿನಲ್ಲಿ ಪತ್ರಿಕಾಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದರು.

ಎಚ್.ಡಿ.ಕುಮಾರಸ್ವಾಮಿ: ಬಹುಶಃ ತುರ್ತು ಪರಿಸ್ಥಿತಿಯಲ್ಲೂ ಇಂತಹ ಸ್ಥಿತಿ ಬಂದಿರಲಿಲ್ಲ, ಮಾಧ್ಯಮಗಳ ಮೇಲೆ ಅಂಕುಶ ಹಾಕಲು ಹೊರಟಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಗದಾ ಪ್ರಹಾರ ಮಾಡಲು ಹೊರಟಂತಾಗಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ: ಚುನಾವಣೆ ಉಸ್ತುವಾರಿಯಾಗಿ ನಾಯ್ಡು ಮೇಮಕ
ಹೊಸ ಪಕ್ಷ ರಚನೆ: ಸಿಂಧ್ಯಾ ಇಂಗಿತ
ರೇಣುಕಾಗೆ ಅಂಕುಶ ಹಾಕಿ: ಪ್ರಧಾನಿಗೆ ಸಿಎಂ ಆಗ್ರಹ
ಕುರ್ಚಿ ಬಿಡಲು ಸಿದ್ದನಿದ್ದೇನೆ: ಯಡಿಯೂರಪ್ಪ
ಕಾನೂನು ಕೈಗೆತ್ತಿಕೊಂಡರೆ 'ಗೂಂಡಾ ಕಾಯ್ದೆ': ಆಚಾರ್ಯ
ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸಿದರೆ ಕ್ರಮ: ಬಿದರಿ