ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಮಸೇನೆಗೆ ವ್ಯಾಲೆಂಟೈನ್ ಗಿಫ್ಟ್: ಪಿಂಕ್ ಚಡ್ಡಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಸೇನೆಗೆ ವ್ಯಾಲೆಂಟೈನ್ ಗಿಫ್ಟ್: ಪಿಂಕ್ ಚಡ್ಡಿ!
ಡೇಟಿಂಗ್ ಮಾಡುತ್ತಿರುವ ಪ್ರೇಮಿಗಳನ್ನು ಮದುವೆ ಮಾಡಿಸುವುದಾಗಿ 'ಬೆದರಿಕೆ' (!) ಒಡ್ಡಿರುವ ಶ್ರೀರಾಮಸೇನೆಗೆ ಅಮೂಲ್ಯ ಉಡುಗೊರೆಯೊಂದು ಕಾದಿದೆ. ಆರ್ಥಿಕ ಹಿಂಜರಿತದ ಅವಧಿಯಲ್ಲಿ ವಿಭಿನ್ನ ಕಂಪನಿಗಳು ಪಿಂಕ್ ಸ್ಲಿಪ್ ಕೊಡುವುದನ್ನು ನೀವು ಕೇಳಿಬರಹುದು. ಆದರೆ ವ್ಯಾಲೆಂಟೈನ್ಸ್ ದಿನದಂದು ಶ್ರೀರಾಮಸೈನಿಕರಿಗೆ ದೊರೆಯಲಿವೆ ಪಿಂಕ್ ಚಡ್ಡಿಗಳ ಉಡುಗೊರೆ!

ಹೌದು. ಈಗಾಗಲೇ ನಾಲ್ಕುವರೆ ಸಾವಿರದಷ್ಟು ಮಹಿಳೆಯರು ಈ ಪಿಂಕ್ ಚಡ್ಡಿ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಈ ಬಗ್ಗೆ ಬ್ಲಾಗುಗಳಲ್ಲಿ, ಸ್ನೇಹಕೂಟದ ತಾಣಗಳಲ್ಲಿ ಆಂದೋಲನ ಜೋರಾಗಿಯೇ ನಡೆಯುತ್ತಿದೆ. ಫೆಬ್ರವರಿ 5ರಂದು ಫೇಸ್‌ಬುಕ್ ತಾಣದಲ್ಲಿ ಇದಕ್ಕಾಗಿ ಒಂದು ಸಮೂಹವೇ ನಿರ್ಮಾಣವಾಗಿದೆ. ಅಲ್ಲದೆ "ಪಬ್ ಗೋಯಿಂಗ್, ಲೂಸ್ ಆಂಡ್ ಫಾರ್ವರ್ಡ್ ವುಮನ್" ಒಕ್ಕೂಟದ ಹೆಸರಿನಲ್ಲಿ ಸಂಘಟನೆಯೊಂದು ದಿಪಿಂಕ್‌ಚಡ್ಡಿಕ್ಯಾಂಪೇನ್ ಎಂಬ ಬ್ಲಾಗ್‌ಸ್ಪಾಟ್ ತಾಣವೊಂದನ್ನು ಈಗಾಗಲೇ ರೂಪಿಸಿದೆ.

ನಸುಗುಲಾಬಿ ಬಣ್ಣದ ಒಳಚಡ್ಡಿಯನ್ನು ದಾನ ಮಾಡುವಂತೆ ಮಹಿಳೆಯರಿಗೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದ್ದು, ಈ ಕುರಿತು ಇ-ಮೇಲ್‌ಗಳೂ ಹರಿದಾಡುತ್ತಿವೆ. ದೇಶದ ವಿವಿಧ ನಗರಗಳಲ್ಲಿ ಪಿಂಕ್ ಚಡ್ಡಿ ಸಂಗ್ರಹಣೆಗಾಗಿಯೇ 'ಡ್ರಾಪ್ ಬಾಕ್ಸ್'ಗಳನ್ನು ಇರಿಸಲಾಗಿದೆ ಎಂದು ಆಂದೋಲನದ ವೆಬ್ ತಾಣಗಳು ಹೇಳುತ್ತಿದ್ದು, ಬೆಂಗಳೂರು, ದೆಹಲಿ, ಮುಂಬೈ ಮುಂತಾದೆಡೆಗಳಲ್ಲಿ ಯಾರಿಗೆ ಕಳುಹಿಸಬಹುದು, ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ವಿವರಗಳನ್ನೂ ನೀಡಲಾಗಿದೆ. ಇಲ್ಲವಾದಲ್ಲಿ, ನೇರವಾಗಿ ಶ್ರೀರಾಮ ಸೇನೆ ಕಚೇರಿಗಳಿಗೇ ಪಿಂಕ್ ಚಡ್ಡಿಗಳನ್ನು ರವಾನಿಸಬಹುದಂತೆ.

ನಿಮ್ಮ ಮನೆಯಲ್ಲಿ ಪಿಂಕ್ ಚಡ್ಡಿ ಇಲ್ಲದಿದ್ದರೆ, ಅತ್ಯಂತ ಅಗ್ಗದ ಚಡ್ಡಿಗಳನ್ನು ಖರೀದಿಸಿ. ಒಟ್ಟಾರೆ ಅದು ಪಿಂಕ್ ಬಣ್ಣದ್ದಾಗಿರಬೇಕು. ನಮ್ಮ ಸಂಸ್ಕೃತಿ ರಕ್ಷಕರಿಗೆ ಈ ಬಾರಿ ವ್ಯಾಲೆಂಟೈನ್ ಡೇ ಉಡುಗೊರೆ ನೀಡೋಣ ಬನ್ನಿ ಎಂಬ ಆಹ್ವಾನವನ್ನು ಇಲ್ಲಿ ನೀಡಲಾಗಿದೆ.

ಇಷ್ಟು ಮಾತ್ರವೇ? ಮಹಿಳೆಯರಿಗೆ 'ಪಬ್ ಭರೋ' ಎಂಬ ಆಹ್ವಾನವನ್ನೂ ನೀಡಲಾಗಿದೆ. ಎಲ್ಲೇ ಇದ್ದರೂ, ವ್ಯಾಲೆಂಟೈನ್ ದಿನದಂದು ಸಮೀಪದ ಪಬ್ಬಿಗೆ ಭೇಟಿ ನೀಡಿ. ನೀವು ಮಾದಕ ದ್ರವ್ಯ ಸೇವಿಸುತ್ತೀರೋ ಬಿಡುತ್ತೀರೋ ನಿಮಗೆ ಬಿಟ್ಟ ವಿಷಯ. ಜ್ಯೂಸ್ ಬೇಕಾದ್ರೂ ಕುಡಿಯಿರಿ. ಆದರೆ ಪಬ್ಬಿಗೆ ಹೋಗಿ, ಅದರ ಫೋಟೋಗಳನ್ನು ಶ್ರೀರಾಮಸೇನೆಗೆ ಕಳುಹಿಸಿ ಎಂದೂ ಬ್ಲಾಗುತಾಣದಲ್ಲಿ ಕರೆ ನೀಡಲಾಗಿದೆ.

ಈ ಬ್ಲಾಗಿನಲ್ಲಿ ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೂ ಪ್ರೇಮ ಸಂದೇಶ ನೀಡುವಂತೆ ಕರೆ ನೀಡಲಾಗಿರುವುದು ವಿಶೇಷ. ಕೊನೆಯಲ್ಲೊಂದು ಸೂಚನೆ ಹಾಕಲಾಗಿದ್ದು, ಪಿಂಕ್ ಸಿಗದೇ ಇದ್ದರೂ ಪರವಾಗಿಲ್ಲ, ಪುರುಷರು ಮತ್ತು ಮಹಿಳೆಯರು ತಮ್ಮ ಚಡ್ಡಿಗಳನ್ನು ಅಥವಾ ಚಡ್ಡಿಯ ಚಿತ್ರಗಳನ್ನು ಕಳುಹಿಸಲು ಆಹ್ವಾನ ನೀಡಲಾಗಿದೆ.

ಈ ಆಂದೋಲನ ಆರಂಭಿಸಿದ್ದು ಸುದ್ದಿ ಪೋರ್ಟಲ್ ಒಂದರ ಪತ್ರಕರ್ತೆ ನಿಶಾ ಸೂಸನ್.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಪಟ್ಟ ?
ಶ್ರುತಿ ಪ್ರಕರಣದಲ್ಲಿ ಸಿಪಿಎಂ ಕೈವಾಡವಿಲ್ಲ
ಕೊಲೆ ಪ್ರಕರಣ: ಶಿವಾಚಾರ್ಯ ಸ್ವಾಮೀಜಿ ಬಂಧನ
ಆರ್ಥಿಕ ಹಿಂಜರಿತ ರಕ್ಷಣಾ ವಲಯಕ್ಕೆ ಧಕ್ಕೆಯಿಲ್ಲ: ಆಂಟನಿ
ಪ್ರೇಮಿಗಳಿಗೆ ರಕ್ಷಣೆ ನೀಡಿ-ಹೈಕೋರ್ಟ್‌ಗೆ ಮೊರೆ
ಗಣಿಗಾರಿಕೆ ಆದೇಶ ಹೈಕೋರ್ಟ್‌ನಿಂದ ವಜಾ