ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಏನ್ ಕತ್ತೆ ಕಾಯುತ್ತಿದ್ದೀರಾ? ಸಿಎಂ ಕಿಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏನ್ ಕತ್ತೆ ಕಾಯುತ್ತಿದ್ದೀರಾ? ಸಿಎಂ ಕಿಡಿ
ಒಂದು ಬಾರಿ ರಸ್ತೆಗೆ ಡಾಂಬಾರು ಹಾಕಿದ ಮೇಲೆ ಮತ್ತೆ ಅದೇ ರಸ್ತೆಗೆ ಟಾರು ಹಾಕುತ್ತೀರಾ ಆದರೂ ರಸ್ತೆಗಳು ಹಾಳಾಗುತ್ತವೆ. ಕಟ್ಟಿದ ಕಟ್ಟಡಗಳು ಕುಸಿದು ಬೀಳುತ್ತವೆ. ಇದನ್ನು ಮಾಡಲು ಇಂಜಿನಿಯರಿಂಗ್ ಓದಬೇಕೆ?ನಿಮಗೆ ನಾಚಿಕೆಯಾಗುವುದಿಲ್ಲವೆ ?ಏನ್ ಕತ್ತೆ ಕಾಯುತ್ತಿದ್ದೀರಾ?ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂಜಿನಿಯರ್, ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಪರಿ ಇದು.

ಮೊದಲು ರಸ್ತೆ ಮಾಡುವುದು, ಆ ಮೇಲೆ ಪೈಪ್ ಹಾಕುವುದು, ಮತ್ತೆ ರಸ್ತೆ ಮಾಡುವುದು ಇದೆಲ್ಲಾ ಇವತ್ತಿಗೆ ಮುಗಿಯಬೇಕು. ಪ್ರತಿದಿನ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಬೇಕು. ಕಾಮಗಾರಿಗಳ ಪ್ರಗತಿ ವೀಕ್ಷಿಸಬೇಕು, ನಂತರ ವರದಿ ನೀಡಲೇಬೇಕು. ಏಕೆ ಇದಕ್ಕೆಲ್ಲ ಸಂಬಳ ತೆಗೆದುಕೊಳ್ಳುವುದು ಎಂದು ತರಾಟೆಗೆ ತೆಗೆದುಕೊಂಡರು.

ಅಬೈಡ್ ನಮ್ಮ ಬೆಂಗಳೂರು ಉಪಕ್ರಮ ಯೋಜನೆ2020 ಅಡಿಯಲ್ಲಿ ವಿವಿಧ ಯೋಜನೆಗಳ ನಗರ ಪಾಲಿಕೆ ಆವರಣದಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ತಮ್ಮ ಭಾಷಣದದ್ದಕೂ ಇಂಜಿನಿಯರ್,ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಅವರು, ವಿಶ್ವೇಶ್ವರಯ್ಯ ಅವರು ಕನ್ನಂಡಬಾಡಿ ಕಟ್ಟೆ ಕಟ್ಟಿದರು, ಅಂತಹ ಒಂದು ಕಟ್ಟೆ ಕಟ್ಟಲು ಆಗುತ್ತದೆಯೇ, ಅಲ್ಲಿಂದ ಒಂದೇ ಒಂದು ಕಲ್ಲು ಕಿತ್ತುಕೊಂಡು ಬರಲು ನಿಮ್ಮಿಂದ ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.

ಶೀಘ್ರವಾಗಿ ಕೆಲಸ ಮಾಡಿ, ಶೀಘ್ರವಾಗಿ ಬಿಲ್ ಡ್ರಾ ಮಾಡಿ ನಾನು ಅಡ್ಡಿ ಪಡಿಸುವುದಿಲ್ಲ, ಜನರು ಇನ್ನೂ ಸೈರಣೆಯಿಂದ ಇರುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಲಿಕಾನ್ ಸಿಟಿಯಲ್ಲಿ ಏರ್ ಶೋಗೆ ಚಾಲನೆ
ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ: ಈಶ್ವರಪ್ಪ
ಬಿಜೆಪಿಯಲ್ಲಿ ಅಪಸ್ವರ ಇಲ್ಲ: ಅನಂತ್ ಕುಮಾರ್
ಮುತಾಲಿಕ್ ಗಡಿಪಾರು ಮಾಡಲು ಕಾಂಗ್ರೆಸ್ ಆಗ್ರಹ
ರಾಮಸೇನೆಗೆ ವ್ಯಾಲೆಂಟೈನ್ ಗಿಫ್ಟ್: ಪಿಂಕ್ ಚಡ್ಡಿ!
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಪಟ್ಟ ?