ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರೇಮಿಗಳ ನೆರವಿಗೆ ನಾವಿದ್ದೇವೆ: ಅಗ್ನಿ ಶ್ರೀಧರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೇಮಿಗಳ ನೆರವಿಗೆ ನಾವಿದ್ದೇವೆ: ಅಗ್ನಿ ಶ್ರೀಧರ್
NRB
ಪ್ರೇಮಿಗಳ ದಿನಾಚರಣೆಯಂದು ಕಾಣಸಿಗುವ ಜೋಡಿಗಳಿಗೆ ಮದುವೆ ಮಾಡಿಸುವುದಾಗಿ ಧಮಕಿ ಹಾಕಿದ್ದ ಶ್ರೀರಾಮಸೇನೆಗೆ ಪ್ರತಿಯಾಗಿ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಪ್ರೇಮಿಗಳ ದಿನಾಚರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ನಗರದಾದ್ಯಂತ ತಮ್ಮ ಬೆಂಬಲಿಗರನ್ನು ನಿಯೋಜಿಸುವುದಾಗಿ ಹೇಳಿದ್ದಾರೆ.

ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳಿಗೆ ತಾಳಿ ಕಟ್ಟಿ ಇಲ್ಲವೆ ರಾಖಿ ಕಟ್ಟಿ ಎಂಬ ಅಭಿಯಾನದಲ್ಲಿ ಮುತಾಲಿಕ್ ಅವರು ಸಡಲಿಕೆ ಮಾಡಿದ್ದು, ತಂದೆ-ತಾಯಿಗಳ ಒಪ್ಪಿಗೆ ಮೇರೆಗೆ ಮದುವೆ ಮಾಡಿಸುವುದಾಗಿ ಹೇಳಿದ್ದಾರೆ. ಇಲ್ಲದಿದ್ದರೆ ಪೋಷಕರೆ ಠಾಣೆಗೆ ಕರೆದೊಯ್ಯಲಿ ಎಂದಿದ್ದಾರೆ.

ಏನೇ ಆಗಲಿ ಪ್ರೇಮಿಗಳ ದಿನಾಚರಣೆಯಂದು ಶ್ರೀರಾಮಸೇನೆ ಅಡ್ಡಿಪಡಿಸುವುದನ್ನು ತೀವ್ರವಾಗಿ ವಿರೋಧಿಸಿರುವ ಅಗ್ನಿ ಪಡೆ, ಅಂದು ಪ್ರೇಮಿಗಳು ಯಾವುದೇ ಭಯಾತಂಕ ಇಲ್ಲದೆ ವ್ಯಾಲೆಂಟೈನ್ ಡೇ ಆಚರಿಸಬಹುದು ಎಂದು ಅಭಯ ನೀಡಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಅಡ್ಡಿ ಪಡಿಸುವವರಿಗೆ ನಾವೇ ಬುದ್ದಿ ಕಲಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳು ಧ್ವನಿಗೂಡಿಸಿವೆ.

ಒಂದು ವೇಳೆ ಫೆ.14ರಂದು ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ತೊಂದರೆ ಕೊಟ್ಟಲ್ಲಿ, ತಮಗೆ ಮೊಬೈಲ್ ಕರೆ ಮೂಲಕ ಕರೆ ಮಾಡಿದರೆ, ಪ್ರೇಮಿಗಳ ನೆರವಿಗೆ ಧಾವಿಸುವುದಾಗಿ ಅಗ್ನಿ ಶ್ರೀಧರ್ ತಿಳಿಸಿದ್ದಾರೆ.

ನೆರವಿಗಾಗಿ ಕರೆ ಮಾಡಬೇಕಾದ ನಂಬ್ರ:

ಅಗ್ನಿ ಶ್ರೀಧರ್ - 94483-53546, ಬಿ ಟಿ ಲಲಿತಾ ನಾಯಕ್ - 94480-67193, ಡಾ ಸಿದ್ದನಗೌಡ ಪಾಟೀಲ್ - 94480-87594, ಕೋಡಿಹಳ್ಳಿ ಚಂದ್ರಶೇಖರ್ - 98442-93908, ಇಂದೂದರ ಹೊನ್ನಾಪುರ - 94480-48306, ಪಟ್ಟಣಗೆರೆ ಜಯಣ್ಣ - 98450-61744, ಪ್ರೊ ಎನ್ ವಿ ನರಸಿಂಹಯ್ಯ - 94483-38889
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜಭವನ ಚಲೋ ಪ್ರತಿಭಟನೆ: ಕಾಂಗ್ರೆಸ್
ಚಡ್ಡಿ ಕೊಟ್ಟೋರಿಗೆ 'ಪಿಂಕ್ ಸೀರೆ' ಕೊಡುಗೆ: ಮುತಾಲಿಕ್
ಏನ್ ಕತ್ತೆ ಕಾಯುತ್ತಿದ್ದೀರಾ? ಸಿಎಂ ಕಿಡಿ
ಸಿಲಿಕಾನ್ ಸಿಟಿಯಲ್ಲಿ ಏರ್ ಶೋಗೆ ಚಾಲನೆ
ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ: ಈಶ್ವರಪ್ಪ
ಬಿಜೆಪಿಯಲ್ಲಿ ಅಪಸ್ವರ ಇಲ್ಲ: ಅನಂತ್ ಕುಮಾರ್