ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಬ್ ದಾಳಿ-ಕರ್ನಾಟಕಕ್ಕೆ ಕಪ್ಪು ಚುಕ್ಕೆ: ಡಿಕೆಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಬ್ ದಾಳಿ-ಕರ್ನಾಟಕಕ್ಕೆ ಕಪ್ಪು ಚುಕ್ಕೆ: ಡಿಕೆಶಿ
ಪಬ್ ದಾಳಿ, ಪ್ರೇಮಿಗಳ ದಿನಾಚಣೆಗೆ ಅಡ್ಡಿಯಂತಹ ತಾಲಿಬಾನಿಕರಣದಿಂದಾಗಿ ಕರ್ನಾಟಕದ ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಅಂಟಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಕಾಲದಿಂದಲೂ ಹೂಡಿಕೆದಾರರು, ಉದ್ಯಮಿಗಳು, ವಿದೇಶಿಯರು ಕರ್ನಾಟಕದ ಮೇಲೆ ನಂಬಿಕೆಯಿಟ್ಟುಕೊಂಡು ಇಲ್ಲಿ ಬರುತ್ತಿದ್ದರು. ದೆಹಲಿಗಿಂತ ಬೆಂಗಳೂರು ವಿದೇಶಿಯರನ್ನು ಹೆಚ್ಚು ಆಕರ್ಷಿಸುವುದು ಎಂದು ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಮೆಚ್ಚುಗೆ ಸೂಚಿಸಿದ್ದರು. ಆದರೆ ಈಗ ಅಂತಹ ನಂಬಿಕೆಗಳು ಹೊರಟು ಹೋಗಿದೆ ಎಂದು ವಿಷಾದಿಸಿದರು.

ರಾಜ್ಯ ಸರ್ಕಾರವನ್ನು ಕಿತ್ತು ಹಾಕೋದು ನಮ್ಮ ಉದ್ದೇಶವಲ್ಲ. ಜನ ತೀರ್ಮಾನ ಮಾಡಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯದ ಭವಿಷ್ಯವೇನು? ಎಂದು ಅವರು ಪ್ರಶ್ನಿಸಿದರು.


ಹೂಡಿಕೆದಾರರೇ ಬರದೇ ಇದ್ದರೆ ಉದ್ಯೋಗ ಸೃಷ್ಟಿ, ಬಂಡವಾಳ ಹರಿವು ಇವುಗಳ ಪರಿಣಾಮ ಬೀರುತ್ತದೆ. ಈ ಕುರಿತು ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರದ ವಿರುದ್ಧ ಲೋಕಾಯುಕ್ತ ಕಿಡಿ
'ತಾಲಿಬಾನ್' ಹೇಳಿಕೆ-ರೇಣುಕಾಗೆ ಕೋರ್ಟ್ ನೋಟಿಸ್
ಸಂಸದ ಸ್ಥಾನಕ್ಕೆ ಬಂಗಾರಪ್ಪ ರಾಜೀನಾಮೆ
ಮದುವೆ ಮಾಡಿಸೊಲ್ಲ-ಪ್ರೇಮಕ್ಕೆ ವಿರೋಧವಿಲ್ಲ: ಮುತಾಲಿಕ್
ನಕಲಿ ಸಿಬಿಐ ಅಧಿಕಾರಿಗಳು ಪೊಲೀಸ್ ಬಲೆಗೆ
'ಒಂಬುಡ್ಸ್‌ಮನ್' ಮುಗಿದ ಅಧ್ಯಾಯ: ಆಚಾರ್ಯ