ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಘಪರಿವಾರ ಗೂಂಡಾಗಿರಿ ?-ಯುವತಿ ನೇಣಿಗೆ ಶರಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಘಪರಿವಾರ ಗೂಂಡಾಗಿರಿ ?-ಯುವತಿ ನೇಣಿಗೆ ಶರಣು
ಪಬ್ ದಾಳಿ ಪ್ರಕರಣ, ಶ್ರುತಿ ಅಪಹರಣದ ಘಟನೆಯಿಂದ ತೀವ್ರ ಮುಖಭಂಗಕ್ಕೀಡಾಗಿದ್ದ ಆಡಳಿತಾರೂಢ ಸರ್ಕಾರವೀಗ ಮತ್ತೊಂದು ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ. ಯುವತಿಯೊಬ್ಬಳು ಅನ್ಯಕೋಮಿನ ಹುಡುಗನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದಾಗ ಸಂಘ ಪರಿವಾರದ ಪಟಾಲಂ ಅವರನ್ನು ಹಿಡಿದು ಪೊಲೀಸರ ಕೈಗೊಪ್ಪಿಸಿದ್ದು, ಇದರಿಂದಾಗಿ ಬಾಲಕಿ ಸಾರ್ವಜನಿಕರೆದುರು ಅವಮಾನಿತಳಾಗಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಕಿನ್ನಿಗೋಳಿಯ ಐಕಳ ಹೈಸ್ಕೂಲ್‌ನ 9ನೇ ತರಗತಿಯಲ್ಲಿ ಕಲಿಯುತ್ತಿರುವ 16ರ ಹರೆಯದ ವಿದ್ಯಾರ್ಥಿನಿ ಅಶ್ವಿನಿ ಎಂಬಾಕೆ ಆಕೆಯ ಸ್ನೇಹಿತೆ ಮಹಾದೇವಿಯೊಂದಿಗೆ ಬಸ್ ಕಂಡೆಕ್ಟರ್ ಹಾಗೂ ಮಾಲಿಕನಾಗಿರುವ ಸಲೀಂ ಎಂಬಾತನನ್ನು ಭೇಟಿ ಮಾಡುವ ಸಲುವಾಗಿ ಮೂಡುಬಿದಿರೆ ಸಮೀಪದ ಮರೂರು ಎಂಬಲ್ಲಿಗೆ ಮಂಗಳವಾರ ಪ್ರಯಾಣ ಬೆಳೆಸಿದ್ದರು.

ಈ ನಡುವೆ ಶಂಕೆಗೊಳಗಾದ ಸಂಘ ಪರಿವಾರದ ಕಾರ್ಯಕರ್ತರು ಬಸ್ ನಿಲ್ಲಿಸಿ ಸಲೀಂ ಸೇರಿದಂತೆ ಇಬ್ಬರನ್ನೂ ಮರೂರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆಮೇಲೆ ಅಶ್ವಿನಿಯವರ ಹೆತ್ತವರಿಗೆ ದೂರವಾಣಿ ಮೂಲಕ ಕರೆಯಿಸಿ ಹೆತ್ತವರ ಕೈಗೊಪ್ಪಿಸಿದ್ದರು. ಈ ಘಟನೆ ನಡೆದ ಬಳಿಕ ತನಗಾದ ಅವಮಾನವನ್ನು ತಾಳಲಾರದೆ ಆಕೆ ನೇಣಿಗೆ ಶರಣಾಗಿದ್ದಳು.

ಆದರೂ, ಅಶ್ವಿನಿಯ ತಂದೆ ಸಲೀಂ ವಿರುದ್ಧ ತನ್ನ ಮಗಳಿಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದು ಐಪಿಸಿ 376 ಮತ್ತು 305 ಕಾಯ್ದೆಯಡಿಯಲ್ಲಿ ಸಲೀಂ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಸ ಪಬ್‌ಗೆ ಅನುಮತಿ ಇಲ್ಲ: ಕಟ್ಟಾ ಸುಬ್ರಹ್ಮಣ್ಯ
ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಗುಜರಾತ್‌ನಿಂದ ವಿದ್ಯುತ್ ಖರೀದಿ: ಸಿಎಂ
ಪಬ್ ದಾಳಿ-ಕರ್ನಾಟಕಕ್ಕೆ ಕಪ್ಪು ಚುಕ್ಕೆ: ಡಿಕೆಶಿ
ಸರ್ಕಾರದ ವಿರುದ್ಧ ಲೋಕಾಯುಕ್ತ ಕಿಡಿ
'ತಾಲಿಬಾನ್' ಹೇಳಿಕೆ-ರೇಣುಕಾಗೆ ಕೋರ್ಟ್ ನೋಟಿಸ್