ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುತಾಲಿಕ್ ಮನೆ ತುಂಬಾ 'ಪಿಂಕ್ ಚಡ್ಡಿ' ರಾಶಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುತಾಲಿಕ್ ಮನೆ ತುಂಬಾ 'ಪಿಂಕ್ ಚಡ್ಡಿ' ರಾಶಿ!
NRB
ಪ್ರೇಮಿಗಳ ದಿನಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡಿದ್ದ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಪಿಂಕ್ ಚಡ್ಡಿ (ಒಳಉಡುಪು) ನೀಡುವಂತೆ ಪತ್ರಕರ್ತೆ ನಿಶಾ ಸೂಸಾನ್ ನೀಡಿದ್ದ ಕರೆಗೆ ಓಗೊಟ್ಟ ಬೆಂಬಲಿಗರು ಕೊರಿಯರ್ ಮೂಲಕ ಕಳುಹಿಸುತ್ತಿದ್ದು, ಮುತಾಲಿಕ್ ಮನೆಯಲ್ಲಿ 'ಪಿಂಕ್ ಚಡ್ಡಿ' ರಾಶಿ ಬೀಳುವಂತಾಗಿದೆ!

ಸಾಮಾಜಿಕ ಸಂಪರ್ಕ ಅಂತರ್ಜಾಲ ಫೇಸ್ ಬುಕ್‌ನ ಮೂಲಕ ಪತ್ರಕರ್ತೆ ನಿಶಾ ಸೂಸಾನ್ ಶ್ರೀರಾಮಸೇನೆ ವಿರುದ್ಧ ಚಳವಳಿ ಹಮ್ಮಿಕೊಂಡಿದ್ದು, ಮುತಾಲಿಕ್ ಅವರಿಗೆ ಪಿಂಕ್ ಚಡ್ಡಿ ಕೊಡುಗೆ ನೀಡಲು ಕರೆ ನೀಡಿದ್ದರು.

PTI
ಪ್ರೇಮಿಗಳ ದಿನಾಚರಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಬೆಳಗಾವಿಯಲ್ಲಿರುವ ಮುತಾಲಿಕ್ ಮನೆ (ಕಚೇರಿ)ಗೆ ಇಂದು ಕೊರಿಯರ್ ಮೂಲಕ ದೇಶದ ವಿವಿಧ ಭಾಗಗಳಿಂದ ಪಿಂಕ್ ಚಡ್ಡಿಗಳ ಪಾರ್ಸೆಲ್ ಒಂದರ, ಹಿಂದೆ ಒಂದರಂತೆ ಬರತೊಡಗುವ ಮೂಲಕ, ಮನೆ ತುಂಬಾ ಪಿಂಕ್ ಚಡ್ಡಿಗಳೇ ತುಂಬುವಂತಾಗಿದೆ. ಮತ್ತಷ್ಟು ಚೆಡ್ಡಿಗಳು ಬರುವ ನಿರೀಕ್ಷೆ ಇದೆ.

ಪಾರ್ಸೆಲ್ ಮೂಲಕ ಕೇವಲ ಪಿಂಕ್ ಚಡ್ಡಿ ಮಾತ್ರ ಬಂದಿರಲಿಲ್ಲ, ಚಡ್ಡಿ ತುಂಬಾ ಅಶ್ಲೀಲ ಬರಹಗಳೇ ತುಂಬಿವೆ. ಇದರಿಂದ ಕಂಗೆಟ್ಟಿರುವ ಮುತಾಲಿಕ್ ಪಿಂಕ್ ಚಡ್ಡಿಗಳನ್ನು ವಾಪಸು ಕಳುಹಿಸಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಅದರೊಂದಿಗೆ ನಿಶಾ ಸೂಸಾನ್‌ಳಿಗೆ ಪಿಂಕ್ ಸೀರೆ ಕಳುಹಿಸುವುದಾಗಿ ಈ ಸಂದರ್ಭದಲ್ಲಿ ಮುತಾಲಿಕ್ ಹೇಳಿದ್ದಾರೆ.

ಈ ಮೊದಲು ಪಿಂಕ್ ಚಡ್ಡಿಗಳನ್ನು ಸ್ವೀಕರಿಸಲು ನಿರಾಕರಿಸುವುದಾಗಿ ಮುತಾಲಿಕ್ ತಿಳಿಸಿದ್ದರು, ಆದರೆ ಬಂದ ಚಡ್ಡಿಗಳನ್ನು ಅನಾಥಾಶ್ರಮದ ಮಕ್ಕಳಿಗೆ ನೀಡುವಂತೆ ಸ್ವಾಮೀಜಿಯೊಬ್ಬರು ಸಲಹೆ ನೀಡಿದ ಮೇರೆಗೆ ಪಿಂಕ್ ಚಡ್ಡಿ ಸ್ವೀಕರಿಸಲು ನಿರ್ಧರಿಸಿದ್ದ ಅವರು ನಿಲುವು ಬದಲಿಸಿದ್ದಾರೆ.

ಶ್ರೀರಾಮಸೇನೆಗೆ ಪಿಂಕ್ ಚಡ್ಡಿ ನೀಡಲು ನಿರ್ಧರಿಸಿರುವ ಪ್ರತಿಭಟನಾಕಾರರಿಗೆ ಸವಾಲು ಎಂಬಂತೆ, ಚಡ್ಡಿ ಕೊಟ್ಟೋರಿಗೆ ಪಿಂಕ್ ಸೀರೆ ಉಡುಗೊರೆ ಕೊಡುವುದಾಗಿ ಮುತಾಲಿಕ್ ತಿರುಗೇಟು ನೀಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡ ಚಿತ್ರರಂಗ-75: ಸರ್ಕಾರದಿಂದ ನೆರವು
ಬಂಗಾರಪ್ಪ ಆಗಮನಕ್ಕೆ ಆಕ್ಷೇಪ ಇಲ್ಲ: ಮೊಯ್ಲಿ
ರೈಲ್ವೆ ಬಜೆಟ್-ರಾಜ್ಯಕ್ಕೆ ಅನ್ಯಾಯ: ಅನಂತ್ ಕುಮಾರ್
ಲೋಕಸಭೆ: ಕನ್ನಡಿಗರಿಗೆ ಟಿಕೆಟ್ ನೀಡಿ-ಕರವೇ
ಪಬ್ ದಾಳಿ ಪ್ರಕರಣ: ಐಜಿ ಪ್ರಸಾದ್ ವರ್ಗಾವಣೆ
ಪ್ರೇಮಿಗಳ ದಿನ-ಸ್ಥಳದಲ್ಲೇ ಮದುವೆ: ಶ್ರೀರಾಮಸೇನೆ