ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುತಾಲಿಕ್, ಠಾಕ್ರೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ಅಗ್ನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುತಾಲಿಕ್, ಠಾಕ್ರೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ಅಗ್ನಿ
NRB
ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡುವುದು ಸಂಸ್ಕೃತಿಯ ಲಕ್ಷಣ ಅಲ್ಲ, ಅದು ಕುಸಂಸ್ಕೃತಿ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಾಗಿ ಹೇಳಿಕೆ ನೀಡಿದ್ದ ಶ್ರೀರಾಮಸೇನೆಯ ವಿರುದ್ಧ ನಗರದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳ ನೆರವಿನೊಂದಿಗೆ ಯುವಜನ ಸ್ವಾತಂತ್ರ್ಯ ವೇದಿಕೆ ಪ್ರೇಮಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಪ್ರೇಮಿಗಳೇ ಭಯಪಡಬೇಡಿ ನಿಮ್ಮ ನೆರವಿಗೆ ನಾವಿದ್ದೇವೆ' ಎಂಬ ಘೋಷಣೆಯೊಂದಿಗೆ ಅಖಾಡಕ್ಕೆ ಇಳಿದಿರುವ ಅಗ್ನಿಶ್ರೀಧರ್, ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಿಪಿಐಎಂ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ನಗರದ ಕೇಂದ್ರ ಭಾಗದಲ್ಲಿ ಠಿಕಾಣಿ ಹೂಡುವ ಮೂಲಕ ಪ್ರೇಮಿಗಳಿಗೆ ಬೆಂಬಲ ಸೂಚಿಸಿ ಪಹರೆ ಕಾಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಗ್ನಿ, ಮಹಾರಾಷ್ಟ್ರದ ಶಿವಸೇನೆಯ ಬಾಳಾ ಠಾಕ್ರೆಯಿಂದ ಆರಂಭಗೊಂಡ ಈ ಮಾನಸಿಕ ಅಸ್ವಸ್ಥತೆ ಇಂದು ಮುತಾಲಿಕ್‌ವರೆಗೂ ಹಬ್ಬಿದೆ. ಇನ್ನು ಮುಂದೆ ಹೀಗೆ ಬಿಟ್ಟರೆ ಇದು ಅಪಾಯಕಾರಿ ಸ್ಥಿತಿ ತಲುಪಬಹುದು. ಆ ನಿಟ್ಟಿನಲ್ಲಿ ಇಂದು ನಮ್ಮೊಂದಿಗೆ ಪ್ರಗತಿಪರ ಸಂಘಟನೆ, ಮಾಧ್ಯಮಗಳು ಕೈಜೋಡಿಸುವ ಮೂಲಕ ಸಾಂಸ್ಕೃತಿಕ ಭಯೋತ್ಪಾದನೆ ಮಟ್ಟ ಹಾಕಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೀಗೆ ಸಂಸ್ಕೃತಿಯ ಹೆಸರಲ್ಲಿ ಮಾನಸಿಕ ಅಸ್ವಸ್ಥರಂತೆ ವರ್ತಿಸುವ ಶ್ರೀರಾಮಸೇನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ ಅವರು, ಮುತಾಲಿಕ್, ಠಾಕ್ರೆಯನ್ನು ಜೈಲಿನಲ್ಲಿಡಬೇಕು, ಅಲ್ಲಿ ಜಾಗವಿಲ್ಲದಿದ್ದರೆ ಹುಚ್ಚಾಸ್ಪತ್ರೆಗಾದರು ಸೇರಿಸಿ ಎಂದು ಸಲಹೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರೇಮಿಗಳ ದಿನಾಚರಣೆ: ಎಲ್ಲೆಡೆ ಬಿಗಿ ಭದ್ರತೆ
ನಿಶಾ ಸುಸನ್‌ಗೆ ಸೀರೆ,ಬಳೆ ರವಾನೆ: ದುರ್ಗಾಸೇನೆ
ಹೆಚ್ಚುವರಿ ಬೆಲೆ ನಿಗದಿ ಅಧಿಕಾರ ರಾಜ್ಯಕ್ಕಿಲ್ಲ: ಹೈಕೋರ್ಟ್
ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಮುಖ್ಯಮಂತ್ರಿ
ಪ್ರೇಮಿಗಳ ದಿನ: ಮುತಾಲಿಕ್ ಮತ್ತೆ ಬಂಧನ
ಕಾನೂನು ಕೈಗೆತ್ತಿಕೊಂಡರೆ-ಕ್ರಮ ಕೈಗೊಳ್ಳಿ: ಹೈಕೋರ್ಟ್