ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆರೆಗಳನ್ನು ದುರಸ್ತಿಪಡಿಸಿ-ಹೈಕೋರ್ಟ್ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆರೆಗಳನ್ನು ದುರಸ್ತಿಪಡಿಸಿ-ಹೈಕೋರ್ಟ್ ಆದೇಶ
ಬೆಂಗಳೂರು ನಗರದ ಕೆರೆಗಳ ಒತ್ತುವರಿ, ಅಭಿವೃದ್ಧಿ ನಿರ್ಲಕ್ಷ್ಯ, ಅವುಗಳ ದುಸ್ಥಿತಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜ್ಯ ಹೈಕೋರ್ಟ್, ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕೆರೆಗಳ ದುರಸ್ತಿ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.

ಕೆರೆಗಳ ಖಾಸಗೀಕರಣ, ಅಭಿವೃದ್ಧಿ ನಿರ್ಲಕ್ಷ್ಯ, ಒತ್ತುವರಿ ಸಂಬಂಧಿಸಿದಂತೆ ಎನ್ವಾಯರ್‌ಮೆಂಟಲ್ ಸಪೋರ್ಟ್ ಗ್ರೂಪ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನೊಳಗೊಂಡ ನ್ಯಾಯಪೀಠ ಕೆರೆಗಳ ದುರಸ್ತಿಗೆ ಆದೇಶ ನೀಡಿದೆ.

ಕೆರೆಗಳ ಖಾಸಗೀಕರಣ ಮಾಡಿರುವ ಬಗ್ಗೆ ಇದೇ ಸಂದರ್ಭದಲ್ಲಿ ಹೈಕೋರ್ಟ್ ಅಸಮಾಧಾನ ವಕ್ತಪಡಿಸಿದೆ. ನಗರೀಕರಣ ನೆಪದಲ್ಲಿ ಕೆರೆಗಳ ಒತ್ತುವರಿ ಮಾಡಿರುವ ಬಗ್ಗೆ ಮತ್ತು ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಂಡಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕೆರೆಗಳ ನಿರ್ವಹಣೆಯನ್ನು ಕೆಲವೆಡೆ ಖಾಸಗಿ ಅವರಿಗೆ ನೀಡಲಾಗಿದೆ. ಪರಿಸರ, ಪ್ರಾಣಿ, ಪಕ್ಷಿಗಳಿಗೆ ಧಕ್ಕೆಯಾಗದಂತೆ ನಿರ್ವಹಣೆ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಖರ್ಗೆ
ಯಾವುದೇ ನೋಟಿಸ್ ಬಂದಿಲ್ಲ: ರೇಣುಕಾ
ಆಂತರಿಕ ಭಯವನ್ನು ನಿವಾರಿಸಬೇಕು: ಸೀತಾರಾಂ
ನೀತಿ ಸಂಹಿತೆ-ಮರು ಚಿಂತನೆ ಅಗತ್ಯ: ಸಿಎಂ
ನಿರೀಕ್ಷೆ ಹುಸಿಗೊಳಿಸಿದ ಬಜೆಟ್: ಯಡಿಯೂರಪ್ಪ
ರೈತರನ್ನೇ ಹತ್ತಿಕ್ಕುತ್ತಿರುವ ಬಿಜೆಪಿ: ದೇಶಪಾಂಡೆ