ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೀಘ್ರದಲ್ಲೇ ನಿಲುವು ಪ್ರಕಟ: ಅಂಬರೀಷ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರದಲ್ಲೇ ನಿಲುವು ಪ್ರಕಟ: ಅಂಬರೀಷ್
ಮಂಡ್ಯ: ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಕುರಿತು ಕೆಲ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಂಸದ ಅಂಬರೀಶ್ ತಿಳಿಸಿದ್ದು, ತಾವು ಸದ್ಯದ ಮಟ್ಟಿಗೆ ರಾಜಕೀಯದಲ್ಲಿ ತಟಸ್ಥವಾಗಿರುವುದಾಗಿ ನುಡಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಿಲ್ಲ. ಕಾದು ನೋಡಿ ಈ ಬಗ್ಗೆ ಸದ್ಯದಲ್ಲಿಯೇ ತಿಳಿಯಲಿದೆ ಎಂದು ಅಂಬರೀಷ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

ಜನತೆ ಹಾಗೂ ರೈತರ ಮೇಲೆ ತಾವು ಇಟ್ಟಿರುವ ಅಭಿಮಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಸಂಸದರ ಅವಧಿಯಲ್ಲಿ ತಾವು ಅತ್ಯಂತ ಪ್ರಾಮಾಣಿಕವಾಗಿ ನಿಧಿ ಬಳಕೆಯಾಗುವಂತೆ ನೋಡಿ ಕೊಂಡಿದ್ದೇನೆ. ಸಾರ್ವಜನಿಕರ ಹಣ ಎಲ್ಲೂ ದುರ್ಬಳಕೆಯಾಗದ ರೀತಿ ನೋಡಿಕೊಂಡಿದ್ದೇನೆ ಎಂದರು.

ಸದ್ಯದ ಮಟ್ಟಿಗೆ ರಾಜಕೀಯದಿಂದ ದೂರ ಉಳಿದಿದ್ದೇನೆ. ಈ ಬಗ್ಗೆ ಕೆಲ ದಿನಗಳಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳುವೆ ಎಂದ ಅಂಬಿ, ಹೊಗೇನಕಲ್ ವಿಚಾರ ಹಾಗೂ ರೈಲ್ವೆ ಬಜೆಟ್ ಹಾಗೂ ಆಯವ್ಯಯ ಸಂದರ್ಭದಲ್ಲಿ ರಾಜ್ಯಕ್ಕಾಗದ ಅನ್ಯಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನಂತಮೂರ್ತಿ 'ಸಂಸ್ಕಾರ' ಕೃತಿಗೆ ಬಹುಮಾನ
ಮಂಗಳೂರು: ಮಾಜಿ ರೌಡಿ ಕ್ಯಾಂಡಲ್ ಸಂತು ಹತ್ಯೆ
ಗುಲ್ಬರ್ಗಾ: ಮುತಾಲಿಕ್ ಬಿಡುಗಡೆ
ಆಪರೇಶನ್ ಕಮಲ ಪ್ರಜಾತಂತ್ರಕ್ಕೆ ಕಳಂಕ: ದೇಶಪಾಂಡೆ
ದೇವೇಗೌಡರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ
ಕೆರೆಗಳನ್ನು ದುರಸ್ತಿಪಡಿಸಿ-ಹೈಕೋರ್ಟ್ ಆದೇಶ