ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: ಹಾಡಹಗಲೇ ಯುವಕನ ಕೊಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಹಾಡಹಗಲೇ ಯುವಕನ ಕೊಲೆ
ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನವೀನ್ ಅಲಿಯಾಸ್ ಒಂಟೆ ನವೀನ್ (23) ಕೊಲೆಯಾಗಿರುವ ಯುವಕ. ಈತ ನಗರ ಮೀಸಲು ಪಡೆ ಮುಖ್ಯ ಪೇದೆ ರಾಜಣ್ಣ ಅವರ ಪುತ್ರ. ನವೀನ್ ತನ್ನ ಗೆಳೆಯ ಪ್ರಶಾಂತ್ ಜೊತೆ ಮಂಗಳವಾರ ಮಧ್ಯಾಹ್ನ ಬೈಕಿನಲ್ಲಿ ಬಂದು ನಂದಾ ಚಿತ್ರಮಂದಿರ ಬಳಿಯ ಟೀ ಅಂಗಡಿಯಲ್ಲಿ ಚಹಾ ಸೇವನೆ ಮಾಡುತ್ತಿದ್ದ.

ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನವೀನ್ ಮೇಲೆ ಮಾರಕಾಸ್ತ್ತ್ರಗಳಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ತಪ್ಪಿಸಿಕೊಂಡು ಓಡಲಾರಂಭಿಸಿದ ನವೀನ್‌‌ನನ್ನು ದುಷ್ಕರ್ಮಿಗಳು ಬೆನ್ನಟ್ಟಿ ಜೇಮ್ಸ್ ಬಾಂಡ್ ಡ್ರೈಕ್ಲೀನರ್ ಮುಂದೆ ಕೊಂದು ಪರಾರಿಯಾಗಿದ್ದಾರೆ. ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲೇ ನಿಲುವು ಪ್ರಕಟ: ಅಂಬರೀಷ್
ಅನಂತಮೂರ್ತಿ 'ಸಂಸ್ಕಾರ' ಕೃತಿಗೆ ಬಹುಮಾನ
ಮಂಗಳೂರು: ಮಾಜಿ ರೌಡಿ ಕ್ಯಾಂಡಲ್ ಸಂತು ಹತ್ಯೆ
ಗುಲ್ಬರ್ಗಾ: ಮುತಾಲಿಕ್ ಬಿಡುಗಡೆ
ಆಪರೇಶನ್ ಕಮಲ ಪ್ರಜಾತಂತ್ರಕ್ಕೆ ಕಳಂಕ: ದೇಶಪಾಂಡೆ
ದೇವೇಗೌಡರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ