ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣೆ: ರಣರಂಗವಾದ ಮೈಸೂರು ಪಾಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ: ರಣರಂಗವಾದ ಮೈಸೂರು ಪಾಲಿಕೆ
ಕಾಂಗ್ರೆಸ್ ದಾಂಧಲೆ-ಪೀಠೋಪಕರಣ ಧ್ವಂಸ
ಮೈಸೂರು ಪಾಲಿಕೆಯ ಮೇಯರ್ - ಉಪಮೇಯರ್ ಆಯ್ಕೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ದಾಂಧಲೆ ನಡೆಸುವ ಮೂಲಕ ಪಾಲಿಕೆ ರಣರಂಗವಾಗಿ ಮಾರ್ಪಟ್ಟಿದೆ.

65 ಸದಸ್ಯ ಬಲ ಹೊಂದಿರುವ ಮೈಸೂರು ಪಾಲಿಕೆಯ ಮೇಯರ್-ಉಪಮೇಯರ್ ಆಯ್ಕೆಗಾಗಿ ಗುರುವಾರ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಅಧಿಕಾರದ ಗದ್ದುಗೆ ಏರುವ ಕನಸು ಕಂಡಿದ್ದರೆ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಪಾಲಿಕೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದ್ದವು.

ಏತನ್ಮಧ್ಯೆ ಪಕ್ಷೇತರ ಸದಸ್ಯರನ್ನು ಕಾಂಗ್ರೆಸ್ ಮುಖಂಡರು ಅಪಹರಿಸುವ ಯತ್ನಕ್ಕೆ ಮುಂದಾದಾಗ ಬಿಜೆಪಿ ಸದಸ್ಯರು ತಡೆದಿದ್ದರು. ಆ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಹಲವು ಸದಸ್ಯರು ಗಾಯಗೊಂಡಿದ್ದಾರೆ. ಉದ್ರಿಕ್ತ ಕಾಂಗ್ರೆಸ್ ಮುಖಂಡರು ಪೀಠೋಪಕರಣಗಳನ್ನು ಧ್ವಂಸಗೊಳಿಸುವ ಮೂಲಕ ಪಾಲಿಕೆ ರಣರಂಗವಾಗಿ ಮಾರ್ಪಟ್ಟಿದೆ.

ಯಾವುದೇ ಕಾರಣಕ್ಕೂ ಚುನಾವಣೆ ಪ್ರಕ್ರಿಯೆ ಮುಂದುವರಿಯಲು ಬಿಡುವುದಿಲ್ಲ ಎಂದು ಬಿಜೆಪಿ ಪಟ್ಟ ಹಿಡಿದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಯು ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ: ಕಾಗೇರಿ
ಪ್ರಾದೇಶಿಕ ಸಮಸ್ಯೆ ಜೆಡಿಎಸ್ ಚುನಾವಣಾ ಆಸ್ತ್ರ
'ಭಗೀರಥ'ನಾದ ಸಚಿವ: ಭಕ್ತರಿಗೆ ಗಂಗಾ ಜಲ!
ಇಂದಿನಿಂದ ಅಧಿವೇಶನ: ವಾಗ್ದಾಳಿಗೆ ಸಜ್ಜಾದ ಪ್ರತಿಪಕ್ಷ
ಹೊಗೇನಕಲ್‌‌ಗೆ ಕೇಂದ್ರ ಗ್ರೀನ್ ಸಿಗ್ನಲ್: ಪ್ರತಿಭಟನೆ
ಕನ್ನಡ ಕಡೆಗಣನೆ: ಬಿಬಿಎಂಪಿ ವಿರುದ್ಧ ಚಂದ್ರು ಕಿಡಿ