ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ: ಲಾಠಿ ಪ್ರಹಾರದ ವಿರುದ್ಧ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ: ಲಾಠಿ ಪ್ರಹಾರದ ವಿರುದ್ಧ ಪ್ರತಿಭಟನೆ
ಬಳ್ಳಾರಿಯಲ್ಲಿ ರೈತರ ಮೇಲೆ ಲಾಠಿ ಪ್ರಹಾರ ನಡೆಯಲು ಸಚಿವ ಜನಾರ್ದನ ರೆಡ್ಡಿ ಕಾರಣ ಎಂದು ಆರೋಪಿಸಿದ ಜೆಡಿಎಸ್ ವಿದ್ಯಾರ್ಥಿ ಘಟಕದ ಸದಸ್ಯರು ನಗರದ ಭಾರತೀಯ ವಿದ್ಯಾ ಭವನದ ಬಳಿಕಯ ರೆಡ್ಡಿ ನಿವಾಸಕ್ಕೆ ನುಗ್ಗಿ ಪ್ರತಿಭಟಿಸಲು ಯತ್ನಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಗಣಿಧಣಿಗಳ ಒತ್ತಡಕ್ಕೆ ಮಣಿದು ಸರ್ಕಾರ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದೆ ಎಂದು ಪ್ರತಿಭಟನಾಕಾರರು ದೂರಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು.

ಪ್ರತಿಭಟನಾಕಾರರ ವರ್ತನೆಯಿಂದ ಬೇಸತ್ತ ಅಪಾರ್ಟ್‌‌ಮೆಂಟ್‌ನ ಇತರ ನಿವಾಸಿಗಳು ಹಾಗೂ ಜನಾರ್ದನ ರೆಡ್ಡಿ ಅವರ ಬೆಂಬಲಿಗರು ರೇಸ್‌‌ಕೋರ್ಸ್ ರಸ್ತೆಯ ಹಿಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದರು. ನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿಗಾರಿಕೆ-ತಪ್ಪಿತಸ್ಥರ ರಕ್ಷಣೆ ಇಲ್ಲ: ಆಚಾರ್ಯ
ರಾಜ್ಯ ಬಜೆಟ್ ಮಂಡನೆ - ಕೃಷಿ-ಶಿಕ್ಷಣ-ನೀರಾವರಿಗೆ ಆದ್ಯತೆ
ಲಾಡು-ಗಂಗಾಜಲ ಯಾಕೆ? ಕುಡಿಯಲು ನೀರು ಕೊಡಿ: ಬೇಗ್
ಚೌಧುರಿ ವಿರುದ್ಧ ಎಫ್‌‌ಐಆರ್ ದಾಖಲಿಸಲು ಮೀನಮೇಷ
ಕಳಪೆ ಔಷಧಿ ಪೂರೈಕೆ ಕಂಪೆನಿಗಳು ಕಪ್ಪುಪಟ್ಟಿಗೆ
ಭಕ್ತರಿಗೆ ಗಂಗಾಜಲ - ಸಿದ್ದರಾಮಯ್ಯ ಆಕ್ರೋಶ