ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಡಿಯೂರಪ್ಪ ಕಣ್ಣನ್ನು ವೈದ್ಯರಿಗೆ ತೋರಿಸಲಿ: ಖರ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪ ಕಣ್ಣನ್ನು ವೈದ್ಯರಿಗೆ ತೋರಿಸಲಿ: ಖರ್ಗೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆದಷ್ಟು ಬೇಗ ತಮ್ಮ ಎರಡೂ ಕಣ್ಣುಗಳನ್ನು ವೈದ್ಯರಿಗೆ ತೋರಿಸಿ, ಇಲ್ಲದಿದ್ದರೆ ಕುರುಡರಾಗಬಹುದು ಹೀಗೆಂದು ಛೇಡಿಸಿದವರು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ.

ಆಡಳಿತಾರೂಢ ರಾಜ್ಯ ಸರ್ಕಾರದ ಗೃಹ ಸಚಿವ ವಿಎಸ್ ಆಚಾರ್ಯ ಮತ್ತು ವೈದ್ಯಕೀಯ ಸಚಿವ ರಾಮಚಂದ್ರಗೌಡ ಅವರು ಮುಖ್ಯಮಂತ್ರಿಗಳ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ಸಚಿವರ ವರ್ತನೆ ಸರಿಯಿಲ್ಲ. ಅಷ್ಟಾದರೂ ಸಚಿವರ ಬಗ್ಗೆ ಸಿಎಂ ವ್ಯಾಮೋಹ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು ತಮ್ಮ ಕಣ್ಣನ್ನು ವೈದ್ಯರಿಗೆ ತೋರಿಸಿಕೊಳ್ಳುವುದು ಒಳ್ಳೆಯದು ಎಂದು ಕಟುವಾಗಿ ಟೀಕಿಸಿದರು.

ಇಬ್ಬರೂ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದ ಖರ್ಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಮತ್ತು ಸಚಿವ ರಾಮಚಂದ್ರ ಗೌಡ ವಿನಾ ಕಾರಣ ಕಲಾವಿದರ ಮೇಲೆ ಹರಿಹಾಯ್ದ ಘಟನೆಗಳನ್ನು ಉದ್ದೇಶಿಸಿ ಖರ್ಗೆ ಹೀಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಗೃಹ ಸಚಿವರು ಸಮಸ್ಯೆ ಹುಟ್ಟುಹಾಕಿ ಮುಖ್ಯಮಂತ್ರಿಗಳನ್ನು ತೊಂದರೆಗೆ ಸಿಲುಕಿಸುತ್ತಿದ್ದರೆ, ರಾಮಚಂದ್ರೇಗೌಡರೂ ಕೂಡ ಅದೇ ಹಾದಿ ತುಳಿಯುತ್ತಿದ್ದರೂ ಕೂಡ ಮುಖ್ಯಮಂತ್ರಿಗಳು ಕುರುಡು ವ್ಯಾಮೋಹ. ಅದ್ದರಿಂದ ಈ ಎರಡೂ ಕಣ್ಣುಗಳನ್ನು ಸರ್ಜರಿ ಮಾಡಿಸುವುದು ಸೂಕ್ತ ಎಂದು ಖರ್ಗೆ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಳ್ಳಾರಿ: ಲಾಠಿ ಪ್ರಹಾರದ ವಿರುದ್ಧ ಪ್ರತಿಭಟನೆ
ಗಣಿಗಾರಿಕೆ-ತಪ್ಪಿತಸ್ಥರ ರಕ್ಷಣೆ ಇಲ್ಲ: ಆಚಾರ್ಯ
ರಾಜ್ಯ ಬಜೆಟ್ ಮಂಡನೆ - ಕೃಷಿ-ಶಿಕ್ಷಣ-ನೀರಾವರಿಗೆ ಆದ್ಯತೆ
ಲಾಡು-ಗಂಗಾಜಲ ಯಾಕೆ? ಕುಡಿಯಲು ನೀರು ಕೊಡಿ: ಬೇಗ್
ಚೌಧುರಿ ವಿರುದ್ಧ ಎಫ್‌‌ಐಆರ್ ದಾಖಲಿಸಲು ಮೀನಮೇಷ
ಕಳಪೆ ಔಷಧಿ ಪೂರೈಕೆ ಕಂಪೆನಿಗಳು ಕಪ್ಪುಪಟ್ಟಿಗೆ