ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುಷ್ಕರಕ್ಕೆ ಬೆಂಬಲ-27ಮಂದಿ ಅಮಾನತು: ಹೈಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷ್ಕರಕ್ಕೆ ಬೆಂಬಲ-27ಮಂದಿ ಅಮಾನತು: ಹೈಕೋರ್ಟ್
ಗುಲ್ಬರ್ಗ ಹಾಗೂ ಧಾರವಾಡ ಸಂಚಾರಿ ಪೀಠಗಳಿಗೆ ದಿಢೀರ್ ವರ್ಗಾವಣೆಗೊಂಡ ಹೈಕೋರ್ಟ್‌ನ 174 ಸಿಬ್ಬಂದಿಯ ಪ್ರತಿಭಟನೆಗೆ ಪ್ರೋತ್ಸಾಹ ನೀಡಿದ ಪೈಕಿ 27ಮಂದಿಯನ್ನು ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ಈ ಸಿಬ್ಬಂದಿ ಕರ್ತವ್ಯಲೋಪ ಎಸಗಿರುವುದಾಗಿ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ತಮ್ಮ ಸಹೋದ್ಯೋಗಿಗಳಿಗೆ ಬೆಂಬಲ ನೀಡಿದ್ದೇ ಈ ಸಿಬ್ಬಂದಿಗೆ ಈಗ ಕಂಟಕಪ್ರಾಯವಾಗಿದೆ.

ಸಿಬ್ಬಂದಿಯ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯನ್ಯಾಯಮೂರ್ತಿಗಳು ಹೇಳಿದರೂ, ಅದನ್ನ ಕಡೆಗಣಿಸಿ ಮುಷ್ಕರ ನಿರತರಾಗಿರುವುದು ಹೈಕೋರ್ಟ್ ನಿಯಮದ ಉಲ್ಲಂಘನೆ ಆಗಿದೆ ಎಂದು ಅಮಾನತು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಾಗೆಯೇ ಈಗಾಗಲೇ ವರ್ಗಾವಣೆಗೊಂಡಿರುವ ಸಿಬ್ಬಂದಿಯ ವರ್ಗಾವಣೆ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂದೆಗೆಕೊಳ್ಳಲು ಆಗುವುದಿಲ್ಲ, ಒಮ್ಮೆ ಅವರು ತಮಗೆ ತಿಳಿಸಿರುವ ಸ್ಥಳಗಳಿಗೆ ಹೋಗಿ ಕೆಲಸಕ್ಕೆ ಹಾಜರಾದ ನಂತರ, ಅವರನ್ನು ಖುದ್ದಾಗಿ ಕರೆದು ಸಮಸ್ಯೆ ಆಲಿಸಿ, ಅವರ ಮನವಿ ಪರಿಗಣಿಸುವುದಾಗಿ ಮುಖ್ಯನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ 27ಮಂದಿಯನ್ನು ಅಮಾನತು ಮಾಡಿರುವ ಕಾರಣ, ರಾಜ್ಯದ ವಿವಿಧ ಕೋರ್ಟ್‌ಗಳಿಂದ ಸುಮಾರು 15ಮಂದಿ ಶೀಘ್ರಲಿಪಿಗಾರರನ್ನು ಹೈಕೋರ್ಟ್‌ಗೆ ಕರೆಯಿಸಿಕೊಳ್ಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿತ್ರರಂಗ-ಐಟಿ-ಬಿಟಿಗೆ ನಿರಾಸೆ ಮೂಡಿಸಿದ ಬಜೆಟ್
ಕಾನೂನು ಸುವ್ಯವಸ್ಥೆಗೆ ಕೋಕಾ ಜಾರಿ
ಜನರ ಕಣ್ಣೊರೆಸುವ ತಂತ್ರದ ಬಜೆಟ್: ವಿಪಕ್ಷ ಟೀಕೆ
ಬಜೆಟ್‌‌ ಮಧ್ಯೆ 'ಗಾಂಧಿ-ಕುವೆಂಪು-ಬೇಂದ್ರೆ'...
ಯಡಿಯೂರಪ್ಪ ಕಣ್ಣನ್ನು ವೈದ್ಯರಿಗೆ ತೋರಿಸಲಿ: ಖರ್ಗೆ
ಬಳ್ಳಾರಿ: ಲಾಠಿ ಪ್ರಹಾರದ ವಿರುದ್ಧ ಪ್ರತಿಭಟನೆ