ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ತಾಲಿಬಾನ್' ಹೇಳಿಕೆ-ಚೌಧುರಿ ವಿರುದ್ದ ಎಫ್‌ಐಆರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ತಾಲಿಬಾನ್' ಹೇಳಿಕೆ-ಚೌಧುರಿ ವಿರುದ್ದ ಎಫ್‌ಐಆರ್
PTI
ಪಬ್ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ವಿರುದ್ಧ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಎಫ್‌‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವೆ ಚೌಧುರಿ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು, ಎಫ್‌ಐಆರ್ ಪ್ರತಿಯನ್ನು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ನಗರದ ಪಬ್‌ವೊಂದರ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ನಂತರ ರಾಷ್ಟ್ರದಾದ್ಯಂತ ವಿವಾದದ ಕಿಡಿ ಹೊತ್ತಿಕೊಂಡ ಘಟನೆಯ ಕುರಿತಂತೆ ಕೇಂದ್ರ ಸಚಿವೆ ಚೌಧುರಿ ಅವರು, ಮಂಗಳೂರು ತಾಲಿಬಾನೀಕರಣಗೊಳ್ಳುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಸಚಿವರ ಹೇಳಿಕೆ ವಿರುದ್ಧ ಮಂಗಳೂರು ಮೇಯರ್ ಗಣೇಶ್ ಹೊಸಬೆಟ್ಟು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.

ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ್ದ ನಗರದ 3ನೇ ಜೆಎಂ‌ಎಫ್‌ಸಿ ನ್ಯಾಯಾಲಯ, ಶೀಘ್ರವೇ ಚೌಧುರಿ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಸೂಚನೆ ನೀಡಿತ್ತು. ಆದರೆ ನ್ಯಾಯಾಲಯದ ಆದೇಶದ ಬಳಿಕ ಚೌಧುರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಷ್ಕರಕ್ಕೆ ಬೆಂಬಲ-27ಮಂದಿ ಅಮಾನತು: ಹೈಕೋರ್ಟ್
ಚಿತ್ರರಂಗ-ಐಟಿ-ಬಿಟಿಗೆ ನಿರಾಸೆ ಮೂಡಿಸಿದ ಬಜೆಟ್
ಕಾನೂನು ಸುವ್ಯವಸ್ಥೆಗೆ ಕೋಕಾ ಜಾರಿ
ಜನರ ಕಣ್ಣೊರೆಸುವ ತಂತ್ರದ ಬಜೆಟ್: ವಿಪಕ್ಷ ಟೀಕೆ
ಬಜೆಟ್‌‌ ಮಧ್ಯೆ 'ಗಾಂಧಿ-ಕುವೆಂಪು-ಬೇಂದ್ರೆ'...
ಯಡಿಯೂರಪ್ಪ ಕಣ್ಣನ್ನು ವೈದ್ಯರಿಗೆ ತೋರಿಸಲಿ: ಖರ್ಗೆ