ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೇಲಾಧಿಕಾರಿ ಕಿರುಕುಳ: ಪೇದೆ ಆತ್ಮಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಲಾಧಿಕಾರಿ ಕಿರುಕುಳ: ಪೇದೆ ಆತ್ಮಹತ್ಯೆ
ಮೇಲಾಧಿಕಾರಿಯ ಕಿರುಕುಳ ತಾಳಲಾರದೆ ಕೇಂದ್ರ ಮೀಸಲು ಒಡೆಯ ಪೇದೆಯೊಬ್ಬರು ಎ.ಕೆ.47 ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕದಲ್ಲಿರುವ ಸಿಆರ್‌‌ಪಿಎಫ್ ಆವರಣದಲ್ಲಿ ಶುಕ್ರವಾರ ನಡೆದಿದೆ.

ಹರಿಯಾಣದ ಮಹೇಂದ್ರಗಢ ಜಿಲ್ಲೆಯ ವಿಲ್ಲಿಯಾನ ಗ್ರಾಮದ ರಾಮ್ ಕಿಶನ್ (39) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಪಾಳಿ ಕೆಲಸದಲ್ಲಿದ್ದ ಅವರು ಬೆಳಿಗ್ಗೆ 4.45ಕ್ಕೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಗುಂಡು ಅವರ ಗಂಟಲಿನಿಂದ ತೂರಿ ಹೊರಗೆ ಹಾರಿದೆ.

ಸಬ್ ಇನ್ಸ್‌‌ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರು ರಾಮ್ ಕಿಶನ್‌ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 12 ವರ್ಷಗಳಿಂದ ರಾಮ್ ಕಿಶನ್ ಸಿಆರ್‌‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಈವರೆಗೆ ಗೊತ್ತಾಗಿಲ್ಲ. ಮೇಲಾಧಿಕಾರಿ ಕಿರುಕುಳ ನೀಡುತ್ತಿರುವುದಾಗಿ ಸಿಆರ್‌ಪಿಎಫ್ ಮೂಲಗಳು ದೂರಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಸವರಾಜ ಮಾಲಗತ್ತಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ತಾಲಿಬಾನ್' ಹೇಳಿಕೆ-ಚೌಧುರಿ ವಿರುದ್ದ ಎಫ್‌ಐಆರ್
ಮುಷ್ಕರಕ್ಕೆ ಬೆಂಬಲ-27ಮಂದಿ ಅಮಾನತು: ಹೈಕೋರ್ಟ್
ಚಿತ್ರರಂಗ-ಐಟಿ-ಬಿಟಿಗೆ ನಿರಾಸೆ ಮೂಡಿಸಿದ ಬಜೆಟ್
ಕಾನೂನು ಸುವ್ಯವಸ್ಥೆಗೆ ಕೋಕಾ ಜಾರಿ
ಜನರ ಕಣ್ಣೊರೆಸುವ ತಂತ್ರದ ಬಜೆಟ್: ವಿಪಕ್ಷ ಟೀಕೆ
ಬಜೆಟ್‌‌ ಮಧ್ಯೆ 'ಗಾಂಧಿ-ಕುವೆಂಪು-ಬೇಂದ್ರೆ'...