ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದುವಿಗೆ ನಿಷ್ಠನಾಗಿರುವುದಿಲ್ಲ: ವರ್ತೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದುವಿಗೆ ನಿಷ್ಠನಾಗಿರುವುದಿಲ್ಲ: ವರ್ತೂರು
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ನಿಷ್ಠೆ ತೋರುವುದಿಲ್ಲ ಎಂದು ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಹೆಸರಾಗಿದ್ದ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಆರ್.ವರ್ತೂರು ಪ್ರಕಾಶ್ ಹೇಳುವ ಮೂಲಕ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ.

ಸಿದ್ದರಾಮಯ್ಯ ತಮ್ಮ ರಾಜಕೀಯ ಗುರು. ಅವರ ಜೊತೆ ಸೇರಿ ಪ್ರತ್ಯೇಕ ಪಕ್ಷ ಕಟ್ಟಲಾಗುವುದು ಎಂದು ಹೇಳುತ್ತಿದ್ದ ವರ್ತೂರು ಪ್ರಕಾಶ್ ಈಗ ದಿಢೀರನೇ ಈ ರೀತಿ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿಯುವ ನಿರ್ಧಾರ ಮಾಡಿದ ಮೇಲೆ ತಮ್ಮ ನಿಷ್ಠೆ ಬದಲಾಗಿದೆ ಎಂದಿದ್ದಾರೆ. ಈವರೆಗೂ ಸಿದ್ದರಾಮಯ್ಯ ಅವರ ಒಡನಾಡಿಯಾಗಿದ್ದೆ. ಜನಾಂಗದ ಮುಖಂಡರೆಂಬ ಕಾರಣಕ್ಕೆ ಅವರ ಮೇಲೆ ಪ್ರೀತಿ ಇದೆ. ಆದರೆ ಅವರಿಗೆ ರಾಜಕೀಯ ನಿಷ್ಠನಾಗಿರುವುದಿಲ್ಲ ಎಂದು ವರ್ತೂರು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ. ಶೀಘ್ರದಲ್ಲಿಯೇ ಬಿಜೆಪಿಯಲ್ಲಿ ತಮಗೆ ಉನ್ನತ ಸ್ಥಾನ ಸಿಗಲಿದೆ. ಒಂದೆರಡು ದಿನಗಳಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಅವರು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಿರಾಡಿ ಘಾಟ್ ಸ್ಥಳ ಪರಿಶೀಲನೆ
ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ
ಪಬ್ ದಾಳಿ: ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು?
ರಾಮಚಂದ್ರೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ
ಹೊಗೇನಕಲ್ ವಿವಾದ: ತ.ನಾಡು ವಿರುದ್ಧ ದೂರು
ಭ್ರಷ್ಟಾಚಾರಕ್ಕೆ ಸರಕಾರದ ಕುಮ್ಮುಕ್ಕು: ಹೆಗ್ಡೆ