ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಧರಣಿ ಮಾಡುವ ಯೋಗ್ಯತೆ ಗೌಡರಿಗಿಲ್ಲ: ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧರಣಿ ಮಾಡುವ ಯೋಗ್ಯತೆ ಗೌಡರಿಗಿಲ್ಲ: ರೆಡ್ಡಿ
NRB
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ದಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತೆ ವಾಗ್ದಾಳಿ ನಡೆಸಿದ್ದು, ಉದ್ದೇಶಿತ ಜಾಗದಲ್ಲೇ ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಯೋಜನೆ ವಿರೋಧಿಸಿರುವ ಗೌಡರ ವಿರುದ್ಧ ಹರಿಹಾಯ್ದರು.

ಬಳ್ಳಾರಿ ಮತ್ತು ಹಾಸನದಲ್ಲಿ ವಿಮಾನ ನಿಲ್ದಾಣಗಳನ್ನು ಇನ್ನು 2-3 ವರ್ಷಗಳಲ್ಲಿ ಉದ್ಘಾಟಿಸುವುದನ್ನು ದೇವೇಗೌಡರು ನೋಡಬೇಕು. ಅದಕ್ಕಾಗಿ ಅವರಿಗೆ ಆಯುಸ್ಸು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ವಿಮಾನ ನಿಲ್ದಾಣ ಯೋಜನೆ ಕೈಬಿಡದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮಾಡುವುದಾಗಿ ಗೌಡರು ಎಚ್ಚರಿಕೆ ನೀಡಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಸದಸ್ಯರ ಮನೆ ಮುಂದೆ ಧರಣಿ ಮಾಡುವುದಕ್ಕೂ ಅವರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಾವಿನ ವಿಷ ಮಾರಾಟ: ಮೂವರ ಬಂಧನ
ಜನತಾ ಪರಿವಾರ ಒಗ್ಗೂಡಿಸಲು ಸಿಂಧ್ಯ ನಿರ್ಧಾರ
ಯೋಜನಾ ವೆಚ್ಚದ ಶ್ವೇತಪತ್ರ ಹೊರಡಿಸಿ:ದೇಶಪಾಂಡೆ
ಸಿದ್ದುವಿಗೆ ನಿಷ್ಠನಾಗಿರುವುದಿಲ್ಲ: ವರ್ತೂರು
ಶಿರಾಡಿ ಘಾಟ್ ಸ್ಥಳ ಪರಿಶೀಲನೆ
ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ