ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವರ್ಗಾವಣೆಗೆ ಕಟ್ಟುನಿಟ್ಟಿನ ನೀತಿ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಗಾವಣೆಗೆ ಕಟ್ಟುನಿಟ್ಟಿನ ನೀತಿ: ಸಿಎಂ
ರಾಜ್ಯದಲ್ಲಿ ಈ ಬಾರಿ ವರ್ಗಾವಣೆಗೆ ಕಟ್ಟುನಿಟ್ಟಿನ ನೀತಿ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕಳೆದ ಅವಧಿಯಲ್ಲಿ ಪ್ರಥಮ ಬಾರಿಗೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶಾಸಕರ ಒತ್ತಡ ಇತ್ತು. ಆದ್ದರಿಂದ ವರ್ಗಾವಣೆಗಳ ಸಂಖ್ಯೆ ಜಾಸ್ತಿಯಾಯಿತು. ಈ ಸಲ ಬಿಗಿ ನೀತಿ ಅನುಸರಿಸಲಾಗುತ್ತದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ರಾಜ್ಯದ ಜನತೆ ಇಟ್ಟಿರುವ ನಂಬಿಕೆಗೆ ದ್ರೋಹ ಬಾರದ ರೀತಿಯಲ್ಲಿ ಮಾದರಿ ರಾಜ್ಯ ನಿರ್ಮಿಸುವ ಕನಸು ತಮ್ಮದಾಗಿದೆ, ಬಹಳ ವರ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಅನುಭವ ಇರುವವರು ಸಹಕಾರ ನೀಡುವುದು ಮುಖ್ಯ. ರಾಜ್ಯದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಘಟಕ ತೆರೆಯುವ ಭರವಸೆಯನ್ನು ಪ್ರಧಾನಿ ನೀಡಿದ್ದರು.

ಈ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ನೀಡಿದರು ಎಂದು ಆಕ್ಷೇಪ ವ್ಯಕ್ತಪಡಿಸಿದರು. ರೈಲ್ವೆ ಬಜೆಟ್‌‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಭಯೋತ್ಪಾದನೆ ವಿರುದ್ಧ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿ ಹೋರಾಟಕ್ಕೆ ಅಣಿಗೊಳಿಸುವ ಕಾರ್ಯಕ್ರಮಕ್ಕೆ ಕೇಸರೀಕರಣ ಎಂಬ ಟೀಕೆ ಕಾಂಗ್ರೆಸ್‌‌ನಿಂದ ವ್ಯಕ್ತವಾಯಿತು. ಪ್ರತಿಪಕ್ಷ ನಾಯಕರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೂ ಇದರ ವಿರುದ್ಧ ಹೋರಾಟ ನಡೆಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 5000 ಕೋಟಿ ರೂ. ಸಂಪನ್ಮೂಲ ಕೊರತೆ ಆಗಿದೆ. ಸೋರಿಕೆ ತಡೆ ಮೂಲಕ ಕ್ರೋಡೀಕರಣ ಮಾಡಲಾಗುತ್ತದೆ. ಆರ್ಥಿಕ ಹಿಂಜರಿಕೆ ಫಲವಾಗಿ ಕೇಂದ್ರದಿಂದ 1000 ಕೋಟಿ ರೂ. ಅನುದಾನ ಲಭ್ಯವಾಗಲಿಲ್ಲ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಧರಣಿ ಮಾಡುವ ಯೋಗ್ಯತೆ ಗೌಡರಿಗಿಲ್ಲ: ರೆಡ್ಡಿ
ಹಾವಿನ ವಿಷ ಮಾರಾಟ: ಮೂವರ ಬಂಧನ
ಜನತಾ ಪರಿವಾರ ಒಗ್ಗೂಡಿಸಲು ಸಿಂಧ್ಯ ನಿರ್ಧಾರ
ಯೋಜನಾ ವೆಚ್ಚದ ಶ್ವೇತಪತ್ರ ಹೊರಡಿಸಿ:ದೇಶಪಾಂಡೆ
ಸಿದ್ದುವಿಗೆ ನಿಷ್ಠನಾಗಿರುವುದಿಲ್ಲ: ವರ್ತೂರು
ಶಿರಾಡಿ ಘಾಟ್ ಸ್ಥಳ ಪರಿಶೀಲನೆ