ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರಿಗೆ ಕಾಲಿರಿಸದಂತೆ ಮುತಾಲಿಕ್‌‌ಗೆ ನೋಟಿಸ್ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರಿಗೆ ಕಾಲಿರಿಸದಂತೆ ಮುತಾಲಿಕ್‌‌ಗೆ ನೋಟಿಸ್ ?
ನಗರದ ಎಮ್ಮೇಶಿಯಾ ಪಬ್ ದಾಳಿಯ ಹಿನ್ನೆಲೆಯಲ್ಲಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡುವ ಕಾರಣಕ್ಕಾಗಿ ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ಮಂಗಳೂರಿಗೆ ಕಾಲಿರಿಸದಂತೆ ನೋಟಿಸ್ ನೀಡಲು ಸಿದ್ದತೆ ನಡೆದಿದೆ.

ಪ್ರಮೋದ್ ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿರಿಸಬಾರದು ಎಂಬ ಆದೇಶ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಈ ಬಗ್ಗೆ ಮುತಾಲಿಕ್‌ಗೆ ವಾರದೊಳಗೆ ಮಂಗಳೂರು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ನೋಟಿಸ್ ನೀಡುವ ಸಾಧ್ಯತೆ ಇದೆ.

ಮಂಗಳೂರಿನ ಎಮ್ಮೇಶಿಯಾ ಪಬ್‌ನಲ್ಲಿ ಇತ್ತೀಚೆಗೆ ನಡೆದ ಶ್ರೀರಾಮಸೇನೆ ಕಾರ್ಯಕರ್ತರ ದಾಳಿಯ ಬಳಿಕ ಮುತಾಲಿಕ್ ಹೇಳಿಕೆಯಿಂದ ಸಮಾಜದಲ್ಲಿ ಪ್ರಚೋದನೆ ಕಾರಣವಾಗಿದೆ. ಮುತಾಲಿಕ್ ಅವರು ನೋಟಿಸ್ ಪಡೆದ ಬಳಿಕ ಸ್ವತಃ ಬಂದು ಜಿಲ್ಲಾಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗಬಹುದು ಅಥವಾ ಅವರ ಪರ ವಕೀಲರು ಹಾಜರಾಗಬಹುದು. ಒಂದು ವೇಳೆ ಹಾಜರಾಗದಿದ್ದರೆ ಈ ಆದೇಶ ಜಾರಿಗೊಳಿಸುತ್ತೇವೆ ಎಂದು ಪೊನ್ನುರಾಜ್ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಈಗಾಗಲೇ ಶ್ರೀರಾಮಸೇನೆಯ ರಾಜ್ಯ ಸಹ ಸಂಚಾಲಕ ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್ ಸೇರಿದಂತೆ ಐವರಿಗೆ ಜಿಲ್ಲಾ ಗಡೀಪಾರು ನೋಟಿಸ್ ಜಾರಿಗೊಳಿಸಲಾಗಿದೆ. ಅವರ ವಿಚಾರಣೆ ಫೆ.24ರಂದು ಮಂಗಳೂರು ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರ್ಗಾವಣೆಗೆ ಕಟ್ಟುನಿಟ್ಟಿನ ನೀತಿ: ಸಿಎಂ
ಧರಣಿ ಮಾಡುವ ಯೋಗ್ಯತೆ ಗೌಡರಿಗಿಲ್ಲ: ರೆಡ್ಡಿ
ಹಾವಿನ ವಿಷ ಮಾರಾಟ: ಮೂವರ ಬಂಧನ
ಜನತಾ ಪರಿವಾರ ಒಗ್ಗೂಡಿಸಲು ಸಿಂಧ್ಯ ನಿರ್ಧಾರ
ಯೋಜನಾ ವೆಚ್ಚದ ಶ್ವೇತಪತ್ರ ಹೊರಡಿಸಿ:ದೇಶಪಾಂಡೆ
ಸಿದ್ದುವಿಗೆ ನಿಷ್ಠನಾಗಿರುವುದಿಲ್ಲ: ವರ್ತೂರು