ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ಧ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ಧ: ಸಿಎಂ
ಬಳ್ಳಾರಿ ನಿಯೋಜಿತ ಸ್ಥಳದಲ್ಲಿ ವಿಮಾನ ನಿಲ್ದಾಣ ಮಾಡಿಯೇ ಸಿದ್ಧ. ಯಾರೇ ಅಡ್ಡಿ ಮಾಡಿದರೂ ಸಹಿಸುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಯೋಜನೆ ವಿರೋಧಿಸುತ್ತಿರುವ ದೇವೇಗೌಡರು ಹಾಸನದಲ್ಲಿ ರೈತರ ಜಮೀನು ಪಡೆದುಕೊಂಡಿರುವ ಉದ್ದೇಶವೇನು? ಅವರಂತೆ ನಾವು ತಪ್ಪು ಮಾಡುತ್ತಿಲ್ಲ. ಅವರ ದೃಷ್ಟಿ ಕೇವಲ ಬಳ್ಳಾರಿ ರಾಜಕಾರಣದ ಮೇಲಿದೆ. ಉದ್ದೇಶಿತ ವಿಮಾನ ನಿಲ್ದಾಣ ಆಗುವುದು ನಿಶ್ಚಿತ ಎಂದು ಸಿಎಂ ಸ್ಪಷ್ಟಪಡಿಸಿದರು.

ಸರಕಾರದ ಶೇ. 50 ರಷ್ಟು ಕೆಲಸವನ್ನು ಮಠಗಳು ನಿರ್ವಹಿಸುತ್ತಿವೆ. ನಮಗಿಂತಲೂ ಉತ್ತಮ ಶಿಕ್ಷಣ ನೀಡುತ್ತಿವೆ. ಹಾಗಾಗಿ ಸರಕಾರ ನೀಡುವ ಅನುದಾನ ಸಹಾಯವಲ್ಲ , ಕರ್ತವ್ಯ. ಅನುದಾನ ನೀಡಿಕೆಯಲ್ಲಿ ಯಾವುದೇ ಓಲೈಕೆ ಮಾತಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಿದ್ದೇವೆ ಎಂದು ಘೋಷಿಸಿದರು.

ಸರ್ಕಾರದ ಬಗ್ಗೆ ಆಕ್ಷೇಪ ಎತ್ತಿರುವ ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಶ್ರೀಗಳೊಂದಿಗೆ 2-3 ದಿನದಲ್ಲಿ ಭೇಟಿಯಾಗಿ ಚರ್ಚೆ ನಡೆಸಲಾಗುವುದು. ಜಾತಿ ಪಟ್ಟಿಗೆ ಹಲವನ್ನು ಸೇರ್ಪಡೆ ಮಾಡುತ್ತಿರುವ ಸರಕಾರ, ಜಾತಿ ಪುನರ್ವಿಂಗಡಣೆ ಮಾಡುತ್ತಿಲ್ಲ. ಬದಲಾಗಿ ಆಗಿರುವ ಲೋಪದೋಷಗಳನ್ನು ಸರಿಪಡಿಸುತ್ತಿದೆ ಎಂದು ಅವರು ಹೇಳಿದರು.

ಕಲಾವಿರ ಜೊತೆ ಸಚಿವ ರಾಮಚಂದ್ರೇಗೌಡ ನಡೆದುಕೊಂಡ ರೀತಿ ಸರಿಯಲ್ಲ. ಈ ಬಗ್ಗೆ ಸಚಿವರೊಂದಿಗೆ ಸಮಾಲೋಚಿಸಿ ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
26, 27ರಂದು ಮದರಾಸಿನಲ್ಲಿ ಕನ್ನಡದ ಕಹಳೆ
'ಡಾಕ್ಟರ್' ಅಂತ ಕರೀಬೇಡಿ-ಯಡಿಯೂರಪ್ಪ ಆಜ್ಞೆ
ಕುರ್ಚಿ ಬಿಡಲು ಖರ್ಗೆ ನಕಾರ:ಇಕ್ಕಟ್ಟಿನಲ್ಲಿ ಕಾಂಗ್ರೆಸ್
ಮಠ-ಮಠಾಧೀಶರ ವಿರುದ್ಧ ಗೌಡರ ಆಕ್ರೋಶ
ಪಬ್ ದಾಳಿ-ಮೇಯರ್ ವಿರುದ್ಧವೇ ಕೇಸು: ಬೊಂಡಾಲ
ಮೊಯ್ಲಿಗೆ ವಿಳಾಸವೇ ಇಲ್ಲ: ಯಡಿಯೂರಪ್ಪ ವ್ಯಂಗ್ಯ