ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅರಣ್ಯ ಒತ್ತುವರಿ ಸಕ್ರಮ ಸಾಧ್ಯವಿಲ್ಲ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರಣ್ಯ ಒತ್ತುವರಿ ಸಕ್ರಮ ಸಾಧ್ಯವಿಲ್ಲ: ಸಿಎಂ
ಅರಣ್ಯ ಒತ್ತುವರಿ ಮಾಡಿಕೊಂಡಿರುವುದನ್ನು ಯಾವುದೇ ಕಾರಣಕ್ಕೂ ಸಕ್ರಮ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.

ಮಾನವೀಯತೆಯ ದೃಷ್ಟಿಯಿಂದ ಸರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಸ್ವಲ್ಪ ನಿಧಾನ ಮಾಡುತ್ತಿದೆ ಎಂದು ಸಿಎಂ ತಿಳಿಸಿದರು. ನಿಜವಾದ ಕಡು ಬಡವರು ಭೂ ರಹಿತರು ಒತ್ತುವರಿ ಮಾಡಿಕೊಂಡಿದ್ದರೆ ಅವರಿಗೆ ಪರ್ಯಾಯವಾಗಿ ಕಂದಾಯ ಭೂಮಿಯನ್ನು ಬೇರೆ ಕಡೆ ನೀಡಲು ಕೇಂದ್ರ ಸರಕಾರದ ನಿಯಮಗಳ ಪ್ರಕಾರ ಸಾಧ್ಯವೇ ಇಲ್ಲ. ಆದರೆ ಒತ್ತುವರಿ ಮಾಡಿಕೊಂಡಿರುವವರು ಬಡವರಾದ ಕಾರಣ ಕೇಂದ್ರದ ಮೇಲೆ ಒತ್ತಡ ತಂದು ಪರ್ಯಾಯ ಭೂಮಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಗೌರಿಬಿದನೂರು ತಾಲೂಕಿನಲ್ಲಿ ಆಗಿರುವ ಅರಣ್ಯದಲ್ಲಿನ ಭೂ ಒತ್ತುವರಿ 1978ರ ನಂತರ ಆಗಿರುವ ಅತಿಕ್ರಮಗಳಾಗಿವೆ. ಒಟ್ಟು 104 ರೈತರು 212.30 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಯಾವುದೇ ಪ್ರಕರಣಗಳು ಸಕ್ರಮ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.ಅತಿಕ್ರಮಣಕಾರರನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈಷುಗರ್ ಪುನಶ್ಚೇತನಕ್ಕೆ ಆರ್ಥಿಕ ನೆರವು
ಬಿಜೆಪಿಗೆ 'ಏಡ್ಸ್' ಬಂದಿದೆ: ಮಲ್ಲಿಕಾರ್ಜುನ ಖರ್ಗೆ
ವಿಧಾನಸಭೆ: ವೈ.ಸಂಪಂಗಿ ಅಮಾನತಿಗೆ ಆಗ್ರಹ
ರಾಜ್ಯದಲ್ಲಿರುವುದು ಹಿಜಡಾ ಸರಕಾರ: ಖರ್ಗೆ
ಇನ್ನೆರಡು ದಿನದಲ್ಲಿ ಜೆಡಿಎಸ್‌‌ಗೆ ಸಂಸದ ಶಿವಣ್ಣ ಗುಡ್ ಬೈ
ಅಧಿವೇಶನ: ಕಾಂಗ್ರೆಸ್ ಧರಣಿ-ಸಭಾತ್ಯಾಗ