ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಗನಿಗೆ ಟಿಕೆಟ್ ಕೊಡಿ,ಇಲ್ಲಾಂದ್ರೆ ರಾಜೀನಾಮೆ: ಉದಾಸಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಗನಿಗೆ ಟಿಕೆಟ್ ಕೊಡಿ,ಇಲ್ಲಾಂದ್ರೆ ರಾಜೀನಾಮೆ: ಉದಾಸಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಶಿವಕುಮಾರ ಉದಾಸಿಗೆ ಹಾವೇರಿ ಲೋಕಸಭಾಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡದಿದ್ದರೆ ರಾಜೀನಾಮೆ ನೀಡುವುದಾಗಿ ಸಚಿವ ಸಿ.ಎಂ.ಉದಾಸಿ ಬೆದರಿಕೆ ಹಾಕಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಊಹಾಪೋಹ ಹರಿದಾಡತೊಡಗಿದೆ.

ಟಿಕೆಟ್ ಹಂಚಿಕೆ ಸಂಬಂಧ ನಡೆದ ಸಭೆಯಲ್ಲಿ ಈ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ನನ್ನ ಮಗನೆಂದು ಪರಿಗಣಿಸಿ ಪರಿಗಣಿಸಿ ಟಿಕೇಟ್ ನೀಡುವುದು ಬೇಡ. ಆತ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮೇಲಾಗಿ ಆ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ. ಇದನ್ನಾದರೂ ಪರಿಗಣಿಸಿ ಟಿಕೆಟ್ ನೀಡಬೇಕೆಂದು ಉದಾಸಿ ಒತ್ತಾಯಿಸಿದರೆನ್ನಲಾಗಿದೆ. ಇದಕ್ಕೆ ಮುಖಂಡರು ಸರಿಯಾಗಿ ಉತ್ತರ ನೀಡಲಿಲ್ಲ ಎನ್ನಲಾಗಿದೆ.

ಆಗ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪಕ್ಷದ ಕೆಲ ಮುಖಂಡರು ಉದಾಸಿ ಅವರನ್ನು ಸಭಾ ಸ್ಥಳದಿಂದ 20 ನಿಮಿಷ ಹೊರಗೆ ಕರೆದುಕೊಂಡು ಹೋಗಿ, ಸಮಾಧಾನಪಡಿಸಿ ಸಭೆಗೆ ವಾಪಸು ಕರೆದುಕೊಂಡು ಬಂದರೆನ್ನಲಾಗಿದೆ. ಇದೇ ವೇಳೆ ಟಕೇಟ್ ಹಂಚಿಕೆ ಕುರಿತು ಆರ್ಎಸ್ಎಸ್ ಮುಖಂಡರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಮಧ್ಯರಾತ್ರಿವರೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮರಾಠರಿಗೆ ಅನ್ಯಾಯವಾದರೆ ರಕ್ತ ಹರಿಸಲು ಸಿದ್ದ: ಛಗನ್
ಅರಣ್ಯ ಒತ್ತುವರಿ ಸಕ್ರಮ ಸಾಧ್ಯವಿಲ್ಲ: ಸಿಎಂ
ಮೈಷುಗರ್ ಪುನಶ್ಚೇತನಕ್ಕೆ ಆರ್ಥಿಕ ನೆರವು
ಬಿಜೆಪಿಗೆ 'ಏಡ್ಸ್' ಬಂದಿದೆ: ಮಲ್ಲಿಕಾರ್ಜುನ ಖರ್ಗೆ
ವಿಧಾನಸಭೆ: ವೈ.ಸಂಪಂಗಿ ಅಮಾನತಿಗೆ ಆಗ್ರಹ
ರಾಜ್ಯದಲ್ಲಿರುವುದು ಹಿಜಡಾ ಸರಕಾರ: ಖರ್ಗೆ