ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯ ಬಜೆಟ್ ಬಿಜೆಪಿಯ ಕೈಪಿಡಿ: ಖರ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಬಜೆಟ್ ಬಿಜೆಪಿಯ ಕೈಪಿಡಿ: ಖರ್ಗೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನಲ್ಲಿ ಮಂಡಿಸಿದ್ದ ರಾಜ್ಯ ಬಜೆಟ್ ಬಿಜೆಪಿ ಪ್ರಚಾರದ ಕೈಪಿಡಿಯಂತಿದೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ವಿಧಾನಸಭೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಬಜೆಟ್ ಮೇಲಿನ ಚರ್ಚೆ ನಡೆಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಾರಿಯಾದರು ಉತ್ತಮ ಬಜೆಟ್ ಮಂಡಿಸ್ತಾರೆ ಅನ್ನುವ ನಿರೀಕ್ಷೆ ಸುಳ್ಳಾಗಿದೆ. ಜಾತಿ-ಉಪಜಾತಿ, ಮಠಗಳಿಗೆ 130ಕೋಟಿ ರೂಪಾಯಿ ನೀಡುವ ಮೂಲಕ ಧಾರ್ಮಿಕ ದತ್ತಿ ಇಲಾಖೆಯ ಪಟ್ಟಿಯನ್ನು ತಯಾರಿಸಿದ್ದಾರೆ ಎಂದು ಛೇಡಿಸಿದರು.

ಪದೇ ಪದೇ ರೈತನ ಮಗನೆಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ನೀರಾವರಿಗೆ ಅತಿ ಕಡಿಮೆ ಹಣ ಮೀಸಲಿಟ್ಟಿದ್ದಾರೆ ಎಂದು ದೂರಿದರು. ಹಿಂದೆ ಶೇ.25ರಷ್ಟು ಹಣವನ್ನು ನೀರಾವರಿಗೆ ನೀಡಲಾಗುತ್ತಿತ್ತು. ಇದೀಗ ಅದು ಶೇ.14ಕ್ಕೆ ಇಳಿದಿದೆ. ಹಾಗಾದರೆ ಇದು ರೈತ ಪರ ಬಜೆಟ್ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಹಣ ಕೂಡ ನೀಡಿಲ್ಲ, ಅದರಲ್ಲಿ ರಾಜಕೀಯ ದ್ವೇಷ ಅಡಗಿರುವುದು ಕಾಣುತ್ತದೆ. ಹಿಂದೆ ಎಂದೂ ಈ ರೀತಿ ಮುಖ್ಯಮಂತ್ರಿಗಳು ತಾರತಾಮ್ಯ ಮಾಡಿದ್ದ ಉದಾಹರಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಣನ ಹೊಟ್ಟೆಯೊಳಗೂ ರಿಂಗ್ ಆಯಿತು ಮೊಬೈಲ್!
ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿದ 'ಗಂಗಾಜಲ'
ಬಿಜೆಪಿಗೂ ತಲೆನೋವು ತಂದ ಅಭ್ಯರ್ಥಿಗಳ ಆಯ್ಕೆ
ತಪ್ಪು ಮಾಡಿದ್ದರೆ ಕಿವಿ ಹಿಂಡಿ ಬುದ್ದಿ ಹೇಳಿ: ಸಿಎಂ
ಮಗನಿಗೆ ಟಿಕೆಟ್ ಕೊಡಿ,ಇಲ್ಲಾಂದ್ರೆ ರಾಜೀನಾಮೆ: ಉದಾಸಿ
ಮರಾಠರಿಗೆ ಅನ್ಯಾಯವಾದರೆ ರಕ್ತ ಹರಿಸಲು ಸಿದ್ದ: ಛಗನ್