ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನ್ಯಾಯಾಧೀಶರಿಗೂ ಚಪ್ಪಲಿ ತೂರಿದ ಹಂತಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಧೀಶರಿಗೂ ಚಪ್ಪಲಿ ತೂರಿದ ಹಂತಕ
ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ರೋಸಿಹೋದ ವಿಚಾರಣಾಧೀನ ಕೈದಿಯೊಬ್ಬ ನ್ಯಾಯಾಧೀರತ್ತ ಚಪ್ಪಲಿ ಎಸೆದ ಘಟನೆ ಬುಧವಾರ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದೆ.

ಸಂತೋಷ ಪರಶುರಾಮ ಅಂಚಟಗೇರಿ ಎಂಬ ವಿಚಾರಣಾಧೀನ ಕೈದಿ ನ್ಯಾಯಾಧೀರತ್ತ ಚಪ್ಪಲಿ ಎಸೆದಾತ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಳೆದ ಮೂರು ವರ್ಷಗಳಿಂದ ಈತ ವಿಚಾರಣೆ ಎದುರಿಸುತ್ತಿದ್ದಾನೆ.

2005ರ ಡಿಸೆಂಬರ್‌ನಲ್ಲಿ ಕಾರವಾರದ ಕೋಡಿಬಾಗ್‌ನಲ್ಲಿ ನಡೆದ ಕೇಶವ ಬಿಕ್ಕು ಮೇಸ್ತಾ ಅವರ ಕೊಲೆಗೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಸಂತೋಷ ಅಂಚಟಗೇರಿಯನ್ನು ಬಂಧಿಸಿ ಎರಡನೇ ಆರೋಪಿ ಎಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರಕರಣದ ವಿಚಾರಣೆ ಬುಧವಾರ ನಿಗದಿಯಾಗಿತ್ತು. ಆದರೆ ಆರೋಪಿ ಪರ ವಕೀಲರು ಬಾರದಿದ್ದುದರಿಂದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು 1-6-2009ಕ್ಕೆ ಮುಂದೂಡಿದರು.

ವಿಚಾರಣೆಯನ್ನು ಪದೇ ಪದೇ ಮುಂದೂಡುತ್ತಿರುವುದರಿಂದ ಅಸಮಾಧಾನಗೊಂಡ ರೋಸಿಹೋದ ಆರೋಪಿ ನ್ಯಾಯಾಧೀಶರತ್ತ ಚಪ್ಪಲಿ ತೂರಿದ್ದು, ಅದು ಬೆಂಚ್ ಕ್ಲಾರ್ಕ್ ಸಮೀಪ ಬಿದ್ದಿತು ಎನ್ನಲಾಗಿದೆ.

ಚಪ್ಪಲಿ ಎಸೆದಿರುವುದನ್ನು ಆರೋಪಿ ಒಪ್ಪಿಕೊಂಡಿದ್ದರಿಂದ ಜಿಲ್ಲಾ ಸತ್ರ ಮತ್ತು ಸಿವಿಲ್ ನ್ಯಾಯಾಧೀಶ ಎಚ್.ಎಂ.ಭರತೇಶ ಅವರು ಆರೋಪಿಗೆ ರೂ.200 ದಂಡ ಹಾಗೂ ಇದಕ್ಕೆ ತಪ್ಪಿದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯ ಬಜೆಟ್ ಬಿಜೆಪಿಯ ಕೈಪಿಡಿ: ಖರ್ಗೆ
ಕೋಣನ ಹೊಟ್ಟೆಯೊಳಗೂ ರಿಂಗ್ ಆಯಿತು ಮೊಬೈಲ್!
ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿದ 'ಗಂಗಾಜಲ'
ಬಿಜೆಪಿಗೂ ತಲೆನೋವು ತಂದ ಅಭ್ಯರ್ಥಿಗಳ ಆಯ್ಕೆ
ತಪ್ಪು ಮಾಡಿದ್ದರೆ ಕಿವಿ ಹಿಂಡಿ ಬುದ್ದಿ ಹೇಳಿ: ಸಿಎಂ
ಮಗನಿಗೆ ಟಿಕೆಟ್ ಕೊಡಿ,ಇಲ್ಲಾಂದ್ರೆ ರಾಜೀನಾಮೆ: ಉದಾಸಿ