ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಳೆ ಬೆಳೆಯಾಗಲು ಮಠಗಳಿಗೆ ಹಣ: ಸಿಎಂ ಸಮರ್ಥನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಳೆ ಬೆಳೆಯಾಗಲು ಮಠಗಳಿಗೆ ಹಣ: ಸಿಎಂ ಸಮರ್ಥನೆ
ಹಿಂದಿನ ಸರ್ಕಾರಗಳು ಪಾಪ ಮಾಡಿವೆ. ಹಾಗಾಗಿ ಮಳೆ, ಬೆಳೆ ಆಗಲಿಲ್ಲ. ಈ ಪಾಪ ತೊಳೆಯಲು ದೇವರು, ಮಠಗಳಿಗೆ ಹಣ ಕೊಟ್ಟರೆ ಮಳೆ, ಬೆಳೆ ಆಗುತ್ತದೆ ಎಂಬುದು ನನ್ನ ನಂಬಿಕೆ. ಅದಕ್ಕಾಗಿ ಬಜೆಟ್‌ನಲ್ಲಿ ಮಠಗಳಿಗೆ, ದೇವರಿಗೆ ಹಣ ಕೊಟ್ಟಿದ್ದೇನೆ. ದೇವರು ನಮ್ಮ ಮೇಲೆ ಕೃಪೆ ತೋರುತ್ತಾನೆ ಎಂದು ಮಠಮಾನ್ಯಗಳಿಗೆ ಹಣ ನೀಡಿದ್ದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಬಜೆಟ್ ಕುರಿತ ಚರ್ಚೆಯಲ್ಲಿ ಕಾಂಗ್ರೆಸಿನ ಸಿದ್ದರಾಮಯ್ಯ ವಿವಿಧ ಜಾತಿ, ಸಂಘಟನೆಗಳು, ಮಠಗಳಿಗೆ ಸರ್ಕಾರ ಬಜೆಟ್‌ನಲ್ಲಿ ಹಣ ಒದಗಿಸಿರುವುದನ್ನು ಬಲವಾಗಿ ವಿರೋಧಿಸಿದರು. ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ ಸಮರ್ಥನೆಗೆ ಮುಂದಾದರು. ಆಗ ಮಧ್ಯಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ, ಪಂಡಿತ್ ಜವಾಹರಲಾಲ್ ನೆಹರು ಜಲಾಶಯಗಳು, ಕೆರೆಕಟ್ಟೆಗಳು ಆಧುನಿಕ ಭಾರತದಲ್ಲಿ ನಿಜವಾದ ದೇವಾಲಯಗಳು ಎಂದು ಹೇಳಿದ್ದನ್ನು ಉಲ್ಲೇಖಿಸಿದರು. ಆದರೆ, ಯಡಿಯೂರಪ್ಪ ನಾವು ದೇವರು ದಿಂಡರುಗಳಿಗೂ ಹಣ ಕೊಡ್ತೀವಿ. ಬೆಂಗಳೂರಿನ ಅಭಿವೃದ್ಧಿಯನ್ನೂ ಮಾಡ್ತೀವಿ ಎಂದರು.

ಕಾಗಿನೆಲೆ ಗುರುಪೀಠದ ಕಾರ್ಯಕ್ರಮದಲ್ಲಿ ನೀವು (ಸಿದ್ದರಾಮಯ್ಯ) ಭಾಗವಹಿಸಿ ಅಲ್ಲಿಗೆ ನೀಡಿರುವ 15 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಆಗಿರುವುದನ್ನು ನೋಡಿದ್ದೀರಿ. ಮಠಗಳಿಗೆ ಹಣ ಒದಗಿಸುವ ನೆಪದಲ್ಲಾದರೂ ಆ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ದಿಯಾಗುತ್ತಿರುವುದನ್ನು ಮೆಚ್ಚಬೇಕು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹಾರಾಷ್ಟ್ರ ರಾಜಕಾರಣಿಗಳು ಉಗ್ರರು: ನಾರಾಯಣಗೌಡ
ಲೆಕ್ಕಮರುಪರಿಶೀಲನೆ: ಕೆಎಂಎಫ್ ಅರ್ಜಿ ವಜಾ
ತುಮಕೂರು: ಪತ್ನಿ-ಮಕ್ಕಳಿಬ್ಬರನ್ನು ಕೊಂದು ಪತಿ ಆತ್ಮಹತ್ಯೆ
ಮಂಪರು ಪರೀಕ್ಷೆ ತಜ್ಞೆ ಮಾಲಿನಿ ವಜಾ
ಕನ್ನಡ ಚಿತ್ರರಂಗ-ಅಮೃತಮಹೋತ್ಸವ ಮುಂದೂಡಿಕೆ
ಸಚಿವರಿಗೆ ಆರೋಗ್ಯ ತಪಾಸಣೆ ಮಾಡಿಸಿ: ಖರ್ಗೆ