ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವೇಗೌಡರು ಬದುಕಿರಲಿ: ರೆಡ್ಡಿ ಹೇಳಿಕೆಗೆ ಆಕ್ಷೇಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವೇಗೌಡರು ಬದುಕಿರಲಿ: ರೆಡ್ಡಿ ಹೇಳಿಕೆಗೆ ಆಕ್ಷೇಪ
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ ಅದನ್ನು ನಾನು ಉದ್ಘಾಟಿಸುವುದನ್ನು ನೋಡಲು ಮಾಜಿ ಪ್ರಧಾನಿ ದೇವೇಗೌಡರು ಇನ್ನೂ ಎರಡು ವರ್ಷಗಳ ಕಾಲ ಬದುಕಿರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂಬ ಹೇಳಿಕೆ ನೀಡಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರನ್ನು ಹದ್ದುಬಸ್ತಿನಲ್ಲಿಡಿ ಎಂದು ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ಬಳ್ಳಾರಿ ವಿಮಾನ ನಿಲ್ದಾಣ ವಿವಾದದ ಹಿನ್ನೆಲೆಯಲ್ಲಿ ದೇವೇಗೌಡರ ಬಗ್ಗೆ ಕೀಳುಮಟ್ಟದ ಹೇಳಿಕೆಯನ್ನು ಇತ್ತೀಚೆಗೆ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ನೀಡಿದ್ದರು.

80ವರ್ಷ ದಾಟಿದವರು ಪಾಪಿಗಳು ಎನ್ನುವುದಾದರೆ ಮಾಜಿ ಪ್ರಧಾನಿ ವಾಜಪೇಯಿ,ಲಾಲ್ ಕೃಷ್ಣ ಆಡ್ವಾಣಿ ಅವರು ಪಾಪಿಗಳು ಎಂದು ನಾವು ಹೇಳಬಹುದೇ?ಎಂದು ಗುರುವಾರ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ ಬಾಲಕೃಷ್ಣ ಪ್ರಶ್ನಿಸಿದರು.

ದೇವೇಗೌಡರ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರ ವಹಿಸುವಂತೆ ರೆಡ್ಡಿ ಅವರಿಗೆ ತಾಕೀತು ಮಾಡಿ, ಇಲ್ಲದಿದ್ದರೆ ಬಿಜೆಪಿಯ ಹಿರಿಯ ನಾಯಕರ ಬಗ್ಗೆ ನಾವೂ ಅದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಾಕೃತ ಭಾಷೆಗಳ ಕಡೆಗಣಿಸಿದ ಕೇಂದ್ರ: ಹಂಪನಾ
'ಆಡುಭಾಷಾ ಪದಕೋಶ ಸಂಗ್ರಹ ತಕ್ಷಣದ ಅನಿವಾರ್ಯತೆ'
ಪಶ್ಚಿಮ ಘಟ್ಟದ ನದಿ ನೀರು ಬಳಕೆಗೆ ಕ್ರಮ
ವೈದ್ಯರ ರಾತ್ರಿ ವಾಸ್ತವ್ಯ ಕಡ್ಡಾಯ: ಶ್ರೀರಾಮುಲು
ಹಾಸನದಿಂದಲೇ ಸ್ಪರ್ಧೆ: ದೇವೇಗೌಡ
ಮಳೆ ಬೆಳೆಯಾಗಲು ಮಠಗಳಿಗೆ ಹಣ: ಸಿಎಂ ಸಮರ್ಥನೆ