ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲಂಚ ಪುರಾಣ-ತನಿಖೆಗೆ ಸದನ ಸಮಿತಿ: ಶೆಟ್ಟರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಚ ಪುರಾಣ-ತನಿಖೆಗೆ ಸದನ ಸಮಿತಿ: ಶೆಟ್ಟರ್
ಶಾಸಕ ಸಂಪಂಗಿ ಲಂಚ ಸ್ವೀಕಾರ ಪ್ರಕರಣದಿಂದಾಗಿ ಶಾಸಕರ ಸಮೂಹದ ಬಗ್ಗೆಯೇ ಸಂಶಯಪಡುವಂತಾಗಿದೆ, ಅಲ್ಲದೇ ಇದು ಇಡೀ ವ್ಯವಸ್ಥೆಗೆ ಕಳಂಕ ಬರುವಂತಾಗಿದೆ ಎಂದು ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಮಂಡಲದ ಅಧಿವೇಶನದಲ್ಲಿ ಶುಕ್ರವಾರ ಸಂಪಂಗಿ ಲಂಚ ಸ್ವೀಕಾರ ಪ್ರಕರಣದ ಕುರಿತು ಮಾತನಾಡಿದ ಸ್ಪೀಕರ್, ಸಂಪಂಗಿ ದುರ್ನಡತೆ ಬಗ್ಗೆ ಸದನ ಸಮಿತಿ ರಚಿಸುವುದಾಗಿ ತಿಳಿಸಿ, 30ದಿನದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಉಪಸಭಾಪತಿ ಕೆ.ಜೆ.ಬೋಪಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಸದನ ಸಮಿತಿ ತನಿಖೆ ನಡೆಸಲಿದೆ ಎಂದರು. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಸದನದ ಇತಿಹಾಸದಲ್ಲೇ ಪ್ರಥಮ ಘಟನೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದರಿಂದಾಗಿ ಜನಸಾಮಾನ್ಯರಲ್ಲಿ ಶಾಸಕರ ಬಗ್ಗೆ ಅಸಹ್ಯ ಮೂಡುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಂಕ್ ಚಡ್ಡಿ: ನಿಶಾ ಸೇರಿ 8ಮಂದಿಗೆ ನೋಟಿಸ್
ದೇವೇಗೌಡರು ಬದುಕಿರಲಿ: ರೆಡ್ಡಿ ಹೇಳಿಕೆಗೆ ಆಕ್ಷೇಪ
ಪ್ರಾಕೃತ ಭಾಷೆಗಳ ಕಡೆಗಣಿಸಿದ ಕೇಂದ್ರ: ಹಂಪನಾ
'ಆಡುಭಾಷಾ ಪದಕೋಶ ಸಂಗ್ರಹ ತಕ್ಷಣದ ಅನಿವಾರ್ಯತೆ'
ಪಶ್ಚಿಮ ಘಟ್ಟದ ನದಿ ನೀರು ಬಳಕೆಗೆ ಕ್ರಮ
ವೈದ್ಯರ ರಾತ್ರಿ ವಾಸ್ತವ್ಯ ಕಡ್ಡಾಯ: ಶ್ರೀರಾಮುಲು