ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯದ್ದು ಮಕ್ಮಲ್ ಟೋಪಿ ಬಜೆಟ್: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದ್ದು ಮಕ್ಮಲ್ ಟೋಪಿ ಬಜೆಟ್: ಕುಮಾರಸ್ವಾಮಿ
ವಿವಿಧ ಆದ್ಯತಾ ವಲಯಗಳಿಗೆ ನೀಡಿರುವ ಅನುದಾನದ ಅಂಕಿ ಅಂಶಗಳಲ್ಲಿಯೇ ಮೋಸ ಮಾಡಿ ಜನರಿಗೆ ಮತ್ತೊಮ್ಮೆ ಮಕ್ಮಲ್ ಟೋಪಿ ಹಾಕುತ್ತಿರುವ ಬಜೆಟ್ ಇದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಜೆಟ್‌‌ನ ಮುಖ್ಯಾಂಶಗಳಲ್ಲಿ ಆದ್ಯತಾ ವಲಯಗಳಿಗೆ ನೀಡುವ ಅನುದಾನದ ಗಾತ್ರದ ಕುರಿತು ಹೇಳುವ ಅಂಕಿ-ಅಂಶಗಳಿಗೂ, ಯೋಜನಾ ಗಾತ್ರದಲ್ಲಿ ನಿಗದಿ ಮಾಡಿರುವ ಅನುದಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸರಕಾರ ಯಾರನ್ನೂ ವಂಚಿಸಲು ಹೊರಟಿದೆ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನತೆಯನ್ನು ಮಾತ್ರವಲ್ಲದೆ ಸದನಕ್ಕೂ ಸಹ ದಿಕ್ಕು ತಪ್ಪಿಸುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಬಜೆಟ್‌‌ನಲ್ಲಿ ಹೋಲಿಕೆಗಳನ್ನು ಕಳೆದ ಸಾಲಿನ ಅಂಕಿ ಅಂಶಗಳ ಜತೆ ಮಾಡದೆ ಅದರ ಹಿಂದಿನ ವರ್ಷದ ಅಂಕಿ ಅಂಶಗಳ ಮಾಡುತ್ತಾ ಕಸರತ್ತು ನಡೆಸಿದ್ದಾರೆ ಎಂದು ದೂರಿದರು.

ಪದೇ ಪದೇ ಪ್ರತಿಪಕ್ಷಗಳಿಗೆ ಜನ ಬಡಿಗೆ ತೆಗೆದುಕೊಂಡು ಬಡಿಯುತ್ತಾರೆ ಎಂಬ ಮಾತನ್ನು ಹೇಳುತ್ತೀರಿ. ಆದರೆ ಅದೇ ಜನ ಬಡಿಗೆಯನ್ನು ನಿಮ್ಮ ಮೇಲೆ ಪ್ರಯೋಗಿಸುವ ಕಾಲ ದೂರವಿಲ್ಲವೆಂಬುದನ್ನು ಮರೆಯಬೇಡಿ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರವಿ ಪೂಜಾರಿ ಸಹಚರರ ಬಂಧನ
ಲೋಕಾಯುಕ್ತ ಹೆಗ್ಡೆ-ಬಿ.ಜಯಶ್ರೀಗೆ ಡಾಕ್ಟರೇಟ್
ಪಬ್ ದಾಳಿ: ಶ್ರೀರಾಮಸೇನೆಯ ಇಬ್ಬರು ಗಡಿಪಾರು
ಪಬ್ ದಾಳಿ: ನಿರ್ಮಲಾ ವೆಂಕಟೇಶ್‌‌ಗೆ 'ಗೇಟ್‌ಪಾಸ್'
ಮಂಗಳೂರು: ಎಮ್ನೇಶಿಯ ಪಬ್ ಲೈಸೆನ್ಸ್ ರದ್ದು
ಲಂಚ ಪುರಾಣ-ತನಿಖೆಗೆ ಸದನ ಸಮಿತಿ: ಶೆಟ್ಟರ್