ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೈಸೂರು ಪಾಲಿಕೆ: 8ಸದಸ್ಯರು 'ಕೈ' ಬಿಟ್ಟು ಬಿಜೆಪಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರು ಪಾಲಿಕೆ: 8ಸದಸ್ಯರು 'ಕೈ' ಬಿಟ್ಟು ಬಿಜೆಪಿಗೆ
ಆಡಳಿತಾರೂಢ ಬಿಜೆಪಿ ಸರಕಾರ ಮುಂದುವರಿಸಿರುವ ಆಪರೇಶನ್ ಕಮಲಕ್ಕೆ ಮೈಸೂರು ಮಹಾನಗರ ಪಾಲಿಕೆಯ ಎಂಟು ಮಂದಿ ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರು ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.

ಪ್ರತಿಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ ಭಾರತೀಯ ಜನತಾ ಪಕ್ಷ ಆಪರೇಶನ್ ಮುಂದುವರಿಸಿದೆ, ಶನಿವಾರ ಮೈಸೂರು ಮಹಾನಗರ ಪಾಲಿಕೆಯ 8ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಫೆ.19ರಂದು ಮೈಸೂರು ಮಹಾನಗರ ಪಾಲಿಕೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿತ್ತು, ಆ ಸಂದರ್ಭದಲ್ಲಿ ಪಕ್ಷೇತರರ ಅಭ್ಯರ್ಥಿಯನ್ನು ಅಪಹರಿಸಲು ಕಾಂಗ್ರೆಸ್ ಯತ್ನಿಸಿದೆ ಎಂಬ ಆರೋಪದ ನಡುವೆ ಮಾರಾಮಾರಿ ನಡೆದು ಪಾಲಿಕೆ ರಣರಂಗವಾಗಿತ್ತು. ಅಂತೂ ಕೊನೆಗೂ ಪಾಲಿಕೆಯ ಅಧ್ಯಕ್ಷ ಪಟ್ಟ ಕಾಂಗ್ರೆಸ್‌ಗೆ ಉಪಾಧ್ಯಕ್ಷ ಗದ್ದುಗೆ ಜೆಡಿಎಸ್ ಪಾಲಾಗಿತ್ತು.

ಇದೀಗ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್‌ನ 8 ಸದಸ್ಯರು ಸೇರಿದಂತೆ ಒಟ್ಟು ಹತ್ತು ಮಂದಿ ಬಿಜೆಪಿಗೆ ಸೇರಿದ್ದು, ಬಿಜೆಪಿ ಬಲ ಮತ್ತಷ್ಟು ವೃದ್ದಿಗೊಂಡಂತಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯದ್ದು ಮಕ್ಮಲ್ ಟೋಪಿ ಬಜೆಟ್: ಕುಮಾರಸ್ವಾಮಿ
ರವಿ ಪೂಜಾರಿ ಸಹಚರರ ಬಂಧನ
ಲೋಕಾಯುಕ್ತ ಹೆಗ್ಡೆ-ಬಿ.ಜಯಶ್ರೀಗೆ ಡಾಕ್ಟರೇಟ್
ಪಬ್ ದಾಳಿ: ಶ್ರೀರಾಮಸೇನೆಯ ಇಬ್ಬರು ಗಡಿಪಾರು
ಪಬ್ ದಾಳಿ: ನಿರ್ಮಲಾ ವೆಂಕಟೇಶ್‌‌ಗೆ 'ಗೇಟ್‌ಪಾಸ್'
ಮಂಗಳೂರು: ಎಮ್ನೇಶಿಯ ಪಬ್ ಲೈಸೆನ್ಸ್ ರದ್ದು